ಬೆಂಗಳೂರು;ವಿಧಾನಸಭೆ ಅಧಿವೇಶನದಲ್ಲಿ ಸ್ಪೀಕರ್ ಯು.ಟಿ.ಖಾದರ್ ತುಳು ಭಾಷೆಯಲ್ಲಿ ಗದರಿರುವ ಘಟನೆ ನಡೆದಿದೆ.
ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಸಚಿವ ಎಂ.ಬಿ.ಪಾಟೀಲ್ ನಡುವೆ ಜಟಾಪಟಿ ನಡೆಯುತ್ತಿದ್ದಾಗ ಸ್ಪೀಕರ್ ಕುಳಿತುಕೊಳ್ಳುವಂತೆ ಜೋರು ದನಿಯಲ್ಲಿ ಗದರಿದ್ದಾರೆ.
ಆದರೆ ಯತ್ನಾಳ್ ಮಾತು ಕೇಳದೇ ಇದ್ದಾಗ ಖಾದರ್ ಕೊನೆಗೆ ಹತ್ತಿರದಲ್ಲೇ ಇದ್ದ ಸುನಿಲ್ ಕುಮಾರ್ ಬಳಿ ಖಾದರ್ ‘ಅರೆಡಾ ಪನ್ಲೆ ಅಣ್ಣಾ’ (ಅವರಿಗೆ ಹೇಳಿ ಅಣ್ಣ) ಎಂದು ಹೇಳಿದ್ದಾರೆ.
ಈ ವೇಳೆ ತುಳು ಭಾಷೆ ಅರ್ಥವಾಗದ ಯತ್ನಾಳ್ ಖಾದರ್ ಸಾಹೇಬ್ರ ಕನ್ನಡ ಅರ್ಥ ಮಾಡಿಸ್ಲಿಕ್ಕೆ ಒಂದು ಆಪ್ ಮಾಡಿಕೊಡಿ ಎಂದು ವ್ಯಂಗ್ಯವಾಡಿದ್ದಾರೆ.