ಮೊನ್ನೆ ತಾನೆ ಗಂಡ ಹೆಂಡತಿ ಕಾಲು ಹಿಡಿದುಕೊಂಡಿದ್ದರು- ಯಡಿಯೂರಪ್ಪ ಯಾರಿಗೆ ಹೇಳಿದ್ದು ಗೊತ್ತಾ?

ಮೊನ್ನೆ ತಾನೆ ಗಂಡ ಹೆಂಡತಿ ಕಾಲು ಹಿಡಿದುಕೊಂಡಿದ್ದರು- ಯಡಿಯೂರಪ್ಪ ಯಾರಿಗೆ ಹೇಳಿದ್ದು ಗೊತ್ತಾ?

ಬೆಂಗಳೂರು;ಬಾಬುರಾಮ್ ಚಿಂಚನಸೂರ ಬಿಜೆಪಿ ತ್ಯಜಿಸಿದ ವಿಚಾರವಾಗಿ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಮೊನ್ನೆ ತಾನೆ ಗಂಡ ಹೆಂಡತಿ ಕಾಲು ಹಿಡಿದುಕೊಂಡಿದ್ದರು ನಾವು ಎಲ್ಲೂ ಹೋಗಲ್ಲ ಎಂದಿದ್ದರು. ಇಂದು ಕಾಂಗ್ರೆಸ್ ಗೆ ಸೇರುತ್ತಿದ್ದಾರೆ ಎಂದು ಹೇಳಿದ್ದಾರೆ.

ನಾವು ಎಲ್ಲೂ ಹೋಗಲ್ಲ ಎಂದು ಮೊನ್ನೆಯಷ್ಟೇ ಹೇಳಿದ್ದರು. ಈಗ ಚಿಂಚನಸೂರ ಪಕ್ಷ ಬಿಟ್ಟು ಹೋಗಿದ್ದಾರೆ. ಈಗ ಯಾಕೆ ಚರ್ಚೆ? ಎಂದು ಪ್ರಶ್ನಿಸಿದರು.ಬೇರೆ ಬೇರೆ ಒತ್ತಡಕ್ಕೆ ಪಕ್ಷ ಬಿಟ್ಟು ಹೋಗಿರುವ ಸಾಧ್ಯತೆ ಇದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಟಾಪ್ ನ್ಯೂಸ್