ವಿಜಯಪುರ:ಶಿಕ್ಷಕನೋರ್ವ ಕುಡಿದ ಮತ್ತಿನಲ್ಲೇ ಬಂದು ಶಾಲೆಯಲ್ಲಿ ನಶೆಯಲ್ಲಿ ತೇಲಾಡುತ್ತಿದ್ದ. ಈತನಿಂದ ಬೇಸತ್ತ ಪೋಷಕರು ಇದೀಗ ಶಿಕ್ಷಕನ ವಿರುದ್ಧ ಸಿಡಿದೆದ್ದಿದ್ದಾರೆ.
ಕನ್ನೂರು ಗ್ರಾಮದ ಬಾಲಕಿಯರ ಪ್ರೌಢಶಾಲೆಗೆ ಮದ್ಯಸೇವಿಸಿ ದೈಹಿಕ ಶಿಕ್ಷಕ ಬಿ.ಎಸ್.ರಾಠೋಡ ಎಂಬವರು ದಿನಾ ಬರುತ್ತಿದ್ದರು ಎನ್ನಲಾಗಿದೆ.
ಇದೀಗ ದೈಹಿಕ ಶಿಕ್ಷಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿಡಿಪಿಐಗೆ ಶಾಲಾ ಮಕ್ಕಳ ಪೋಷಕರು ಮನವಿ ಮಾಡಿದ್ದಾರೆ. ಶಿಕ್ಷಕನಿಗೆ ಸೇವೆಯಿಂದ ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.