ಮೀರತ್:ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ ಮತ್ತೊಬ್ಬ ದರೋಡೆಕೋರನನ್ನು ಎನ್ಕೌಂಟರ್ನಲ್ಲಿ ಹೊಡೆದುರುಳಿಸಿದೆ.
ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದ ನೋಯ್ಡಾ, ಘಾಜಿಯಾಬಾದ್ ಮತ್ತು ಇತರ ಪ್ರದೇಶಗಳಲ್ಲಿ ಸಕ್ರಿಯನಾಗಿದ್ದ ಅನಿಲ್ ದುಜಾನಾ ಗೆ ಮೀರತ್ನಲ್ಲಿ ಯುಪಿ ಪೊಲೀಸರ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಎನ್ಕೌಂಟರ್ ಮಾಡಿದೆ ಎಂದು ವರದಿಯಾಗಿದೆ.
ಅನಿಲ್ ದುಜಾನ ಮೇಲೆ 60 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿದೆ ಎನ್ನಲಾಗಿದೆ.
ದುಜಾನಾ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ವಾರದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದರು.ಅದರ ನಂತರ ಅವನು ತನ್ನ ವಿರುದ್ಧ ದಾಖಲಾದ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬನಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದನು ಎಂದು ಮೂಲಗಳು ತಿಳಿಸಿವೆ.ದುಜಾನಾ ಸಾಕ್ಷಿಯನ್ನು ಕೊಲ್ಲಲು ನಿರ್ಧರಿಸಿದ್ದರು ಎಂದು ಪೊಲೀಸರು ಹೇಳಿದರು.
ನಂತರ ಎಸ್ಟಿಎಫ್ ಅವರನ್ನು ಬಂಧಿಸಲು ಮುಂದಾಯಿತು. ಕಾರ್ಯಾಚರಣೆಯ ಸಮಯದಲ್ಲಿ, ದುಜಾನಾ ಮತ್ತು ಅವನ ಗ್ಯಾಂಗ್ ಪೊಲೀಸರ ಮೇಲೆ ದಾಳಿ ಮಾಡಿದರು ಎನ್ನಲಾಗಿದೆ. ಇದು ಗುಂಡಿನ ಚಕಮಕಿ ಮತ್ತು ಅವನ ಸಾವಿಗೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.
ಮೀರತ್ನ ಹಳ್ಳಿಯೊಂದರಲ್ಲಿ ಎನ್ಕೌಂಟರ್ ಸಂಭವಿಸಿದೆ. ಅವನು ಮತ್ತು ಅವನ ಗ್ಯಾಂಗ್ ಅಲ್ಲಿ ಅಡಗಿಕೊಂಡಿದ್ದರು ಮತ್ತು ಸಮೀಪಿಸುವಾಗ ಎಸ್ಟಿಎಫ್ ಮೇಲೆ ಗುಂಡು ಹಾರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣ ಪೊಲೀಸರ ತಂಡ ಗುಂಡು ಹಾರಿಸಿತು. ಈ ವೇಳೆ ಅನಿಲ್ ಮೃತಪಟ್ಟಿದ್ದಾನೆಂದು ವರದಿ ತಿಳಿದೆ.