ಉಡುಪಿ; ದೀಪಾವಳಿ ಪ್ರಯುಕ್ತ ಬಾವಿಗೆ ದೀಪ ಇಡಲು ಹೋದ ಯುವಕ ಬಾವಿಗೆ ಬಿದ್ದು ಮೃತ್ಯು

ಹೆಬ್ರಿ:ದೀಪಾವಳಿ ಹಬ್ಬದ ಪ್ರಯುಕ್ತ ಬಾವಿಗೆ ದೀಪ ಇಡಲು ಹೋದ ಯುವಕ ಬಾವಿಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.

ಹೆಬ್ರಿ ತಾಲೂಕು ಚಾರ ಗ್ರಾಮದ ಚಾರ ಬಸದಿ ಬಳಿ ನಿವಾಸಿ ಸಚಿನ್‌(35)ಮೃತರು.

ಆವರಣವಿಲ್ಲದ ಬಾವಿ ಬಳಿ ದೀಪ ಇಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯ ನೀರಿಗೆ ಬಿದ್ದು ಸಚಿನ್ ಮೃತಪಟ್ಟಿದ್ದಾರೆ.

ಹೆಬ್ರಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್