ಬೀದರ್:ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ತೆಲಂಗಾಣದ ಜಹೀರಾಬಾದ್ ಬಳಿ ನಡೆದಿದೆ.
ಬೀದರ್ ಮೂಲದ ಅವಿನಾಶ್ ಗೋಡೆ (27) ಹಾಗೂ ವೀರೇಶ್ (30) ಎಂದು ಗುರುತಿಸಲಾಗಿದೆ.
ಈ ಇಬ್ಬರು ಯುವಕರು ಸ್ನೇಹಿತರಾಗಿದ್ದು, ಔರಾದ್ನ ನಾಗಮಾರಪ್ಪಳ್ಳಿ ಗ್ರಾಮದ ವಾಸಿಗಳಾಗಿದ್ದಾರೆ.
ಇವರು ಬೀದರ್ ನಿಂದ ಹೈದರಾಬಾದ್ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಏಕಾಏಕಿ ಕಾರು ನಿಯಂತ್ರಣ ತಪ್ಪಿ ಎದುರಿನಿಂದ ಸಾಗುತ್ತಿದ್ದ ಲಾರಿಗೆ ರಭಸವಾಗಿ ಡಿಕ್ಕಿಯಾಗಿದೆ.
ಘಟನೆಯಲ್ಲಿ ಇಬ್ಬರು ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ.
ಜಹೀರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.