ಸೂರತ್ ರೈಲ್ವೇ ನಿಲ್ದಾಣದಲ್ಲಿ ನೂಕು ನುಗ್ಗಲು; ಓರ್ವ ಸಾವು

ಸೂರತ್: ದೀಪಾವಳಿ ಹಬ್ಬ ಹಾಗೂ ಛತ್​ ಹಬ್ಬಕ್ಕಾಗಿ ವಲಸೆ ಕಾರ್ಮಿಕರು ಊರಿಗೆ ಹೋಗುವ ಅವಸರದಲ್ಲಿ ನೂಕು ನುಗ್ಗಲು‌ ಉಂಟಾಗಿ ಕಾಲ್ತುಳಿತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮಹಿಳೆ ಸೇರಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ.

ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೂರತ್​ ರೈಲು ನಿಲ್ದಾಣದಿಂದ ಭಾಗಲ್ಪುರಕ್ಕೆ ಹೋಗುವ ವಿಶೇಷ ರೈಲು ಏರುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.

ನೂಕುನುಗ್ಗಲಿನಲ್ಲಿ ಹಲವರಿಗೆ ಉಸಿರುಗಟ್ಟಿದಂತಾಗಿದ್ದು, ಕೆಲವರಿಗೆ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಸಕಾಲದಲ್ಲಿ ಸಿಪಿಆರ್​ ವ್ಯವಸ್ಥೆ ಮಾಡಿದ್ದಾರೆ. ವಾರಾಂತ್ಯ ಹಾಗೂ ಜೊತೆಗೆ ಹಬ್ಬಗಳಿಗಾಗಿ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳುವ ತಯಾರಿಯಲ್ಲಿದ್ದು,ರೈಲು ನಿಲ್ದಾಣದಲ್ಲಿ ಜನಸಂದಣಿ ಉಂಟಾಗಿತ್ತು.

ಮೃತರನ್ನು ಬಿಹಾರದ ಭಾಗಲ್ಪುರದ ನಿವಾಸಿ ಅಂಕಿತ್​ ವೀರೇಂದ್ರ ಕುಮಾರ್​ ಸಿಂಗ್​​ ಹಾಗೂ ಗಾಯಾಳುಗಳನ್ನು ಅವರ ಸಹೋದರ ರಾಮ್​ ಪ್ರಕಾಶ್​ ವೀರೇಂದ್ರ ಕುಮಾರ್​ ಸಿಂಗ್​ ಹಾಗೂ ಇನ್ನೋರ್ವ ಮಹಿಳೆ ಸುಯಿಜಾ ಸಿಂಗ್​ ಎಂದು ಗುರುತಿಸಲಾಗಿದೆ.

ಸೂರತ್​ ರೈಲು ನಿಲ್ದಾಣದಿಂದ ಭಾಗಲ್ಪುರಕ್ಕೆ ಹೋಗುವ ವಿಶೇಷ ರೈಲು ಏರುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.ನೂಕುನುಗ್ಗಲಿನಲ್ಲಿ ಹಲವರಿಗೆ ಉಸಿರುಗಟ್ಟಿದಂತಾಗಿದ್ದು, ಕೆಲವರಿಗೆ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಸಕಾಲದಲ್ಲಿ ಸಿಪಿಆರ್​ ವ್ಯವಸ್ಥೆ ಮಾಡಿದ್ದಾರೆ.ವಾರಾಂತ್ಯ ಹಾಗೂ ಜೊತೆಗೆ ಹಬ್ಬ ಹರಿದಿನಗಳಿಗಾಗಿ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳುವ ತಯಾರಿಯಲ್ಲಿದ್ದು, ರೈಲು ನಿಲ್ದಾಣದಲ್ಲಿ ಜನಸಂದಣಿ ಉಂಟಾಗಿತ್ತು.

ಟಾಪ್ ನ್ಯೂಸ್