ಎಸೆಸೆಲ್ಸಿಯಲ್ಲಿ ಟಾಪ್ ಅಂಕ ಪಡೆದ ವಿದ್ಯಾರ್ಥಿ ಫಲಿತಾಂಶಕ್ಕೆ ಮೊದಲೇ ದುರ್ಮರಣ; ಭಾವುಕರಾದ ಶಿಕ್ಷಣ ಸಚಿವರು

ತಿರುವನಂತಪುರಂ:ಕೇರಳದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ
ಅಭೂತಪೂರ್ವ ಸಾಧನೆ ಮಾಡಿದ್ದ ವಿದ್ಯಾರ್ಥಿ ಫಲಿತಾಂಶಕ್ಕೆ ಮೊದಲೇ ಇಹಲೋಕ ತ್ಯಜಿಸಿರುವ ಘಟನೆ ನಡೆದಿದೆ.

ಸಾರಂಗ್ ಮೃತ ವಿದ್ಯಾರ್ಥಿ.ಸಾರಂಗ್ ಎಲ್ಲ ವಿಷಯಗಳಲ್ಲಿ ಎ ಪ್ಲಸ್‌ ಪಡೆಯುವ ಪಡೆದು ಪಾಸಾಗಿದ್ದಾನೆ. ಶಿಕ್ಷಣ ಸಚಿವ ವಿ.ಶಿವನಕುಟ್ಟಿ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು, ಸಾರಂಗ್ ಎಂಬ ವಿದ್ಯಾರ್ಥಿಯ ಫಲಿತಾಂಶ ಬಗ್ಗೆ ಹೇಳಿ‌‌ ಕಣ್ಣೀರು ಹಾಕಿದ್ದಾರೆ‌‌.

ಸಾರಂಗ್ ದೊಡ್ಡ ಕೆಲಸ ಮಾಡಿ ನಮ್ಮನ್ನು ಅಗಲಿದ್ದಾರೆ. ಸಾರಂಗ್ ಅಂಗಾಂಗ ದಾನದ ಮೂಲಕ ಆರು ಮಂದಿಗೆ ಹೊಸ ಜೀವನ ನೀಡಿದರು. ದುಃಖದ ಕಡಲಲ್ಲಿಯೂ ಅಂಗಾಂಗ ದಾನಕ್ಕೆ ಮುಂದಾದ ಕುಟುಂಬಕ್ಕೆ ಅಭಿನಂದನೆ ಸಲ್ಲಿಸೋಣ ಎಂದು ಹೇಳಿ ಸಚಿವರು ಭಾವುಕರಾದರು.

ಸಾರಂಗ್ ಗ್ರೇಸ್ ಮಾರ್ಕ್ಸ್ ಇಲ್ಲದೇ ಎಲ್ಲಾ ವಿಷಯಗಳಿಗೂ ಎಪ್ಲಸ್ ಪಡೆದಿರುವುದಾಗಿ ಸಚಿವರು ಹೇಳಿದ್ದಾರೆ.

ಬನೀಶ್ ಕುಮಾರ್ ಮತ್ತು ರಜಿನಿ ದಂಪತಿಯ ಪುತ್ರ ಸಾರಂಗ್ ತನ್ನ ತಾಯಿಯೊಂದಿಗೆ ಕಾರವಾರಂ ವಂಚಿಯೂರು ನಡಕಾಪಂರಂಬ್ ನಿಕುಂಜತ್‌ನಲ್ಲಿ ಮೇ.13ರಂದು ಸಂಜೆ 3 ಗಂಟೆಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ತೊಟ್ಟಕ್ಕಾಡ್ ವಡಕ್ಕೋಟ್​​ಕಾವ್ ಕುನ್ನತ್ತ್ ಕೋಣಂ ಸೇತುವೆ ಬಳಿ ವಾಹನಕ್ಕೆ ಸೈಡ್ ನೀಡುತ್ತಿದ್ದಾಗ ನಿಯಂತ್ರಣ ತಪ್ಪಿದ ಆಟೋ ರಿಕ್ಷಾ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಉರುಳಿತ್ತು.

ತಕ್ಷಣ ಬಾಲಕನಿಗೆ ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಬುಧವಾರ ಅವರ ಮೆದುಳು ಡೆಡ್ ಆಗಿದೆ.ಶುಕ್ರವಾರ ಫಲಿತಾಂಶ ಪ್ರಕಟಿಸುವ ಕೆಲವೇ ಗಂಟೆಗಳಿಗೆ ಮುನ್ನ ಸಾರಂಗ್ ನ ಸಾವು ಸಂಭವಿಸಿದೆ.

ಸಾರಂಗ್ ಆಟ್ಟಿಂಗಲ್ ಸರ್ಕಾರಿ ಬಿಎಚ್‌ಎಸ್‌ಎಸ್‌ನಲ್ಲಿ ಪರೀಕ್ಷೆ ಬರೆದಿದ್ದರು.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com