ಕಾರ್ಕಳ;ಕಾರ್ಕಳದಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸ್ಪರ್ಧೆ ಘೋಷಣೆ ಬಳಿಕ ಇದೀಗ ಶ್ರೀರಾಮಸೇನೆಯೇ ಮುತಾಲಿಕ್ ಸ್ಪರ್ಧೆಗೆ ವಿರೋಧಿಸಿದೆ.
ಮುತಾಲಿಕ್ ಗೆಲ್ಲುವುದಿಲ್ಲ, ಸೋತ ನಂತರ ಅವರು ದುರಂತ ನಾಯಕರಾಗುತ್ತಾರೆ ಎಂದು ಶ್ರೀರಾಮ ಸೇನೆಯ ಮಂಗಳೂರು ವಿಭಾಗಾಧ್ಯಕ್ಷ ಮೋಹನ್ ಭಟ್ ಹೇಳಿದ್ದಾರೆ.
ಕಾರ್ಕಳದಲ್ಲಿ ಸುನಿಲ್ ಕುಮಾರ್ರಂತಹ ನಾಯಕರನ್ನು ಸೋಲಿಸಲು ಸಾಧ್ಯವಿಲ್ಲ, ಅವರ ವಿರುದ್ಧ ಸ್ಪರ್ಧಿಸುವುದು ಸರಿಯಲ್ಲ. ಮುತಾಲಿಕ್ ಅವರೇ ನೀವು ದುರಂತ ನಾಯಕರಾಗಬೇಡಿ,ಮಹಾರಾಷ್ಟ್ರದ ಶಿವಸೇನೆಯ ಬಾಳ್ ಠಾಕ್ರೆಯಂತೆ ನೀವು ಸಂಘಟನೆಯಲ್ಲಿಯೇ ಇದ್ದು ಬೇರೆಯವರನ್ನು ರಾಜಕೀಯದಲ್ಲಿ ಬೆಳೆಸಿ ಎಂದು ಹೇಳಿದ್ದಾರೆ.
ಕಾರ್ಕಳದ ಉದ್ಯಮಿ ಮತ್ತು ವಕೀಲರೊಬ್ಬರ ಕುಮ್ಮಕ್ಕಿನಿಂದ ಮುತಾಲಿಕ್ ಸುನಿಲ್ ಕುಮಾರ್ ಎದುರು ಸ್ಪರ್ಧೆಗಿಳಿಯುತಿದ್ದಾರೆ. ಸುನಿಲ್ ಕುಮಾರ್ ಮೇಲೆ ಉದ್ಯಮಿಯವರು ವೈಯುಕ್ತಿಕ ದ್ವೇಷಕ್ಕಾಗಿ ಮುತಾಲಿಕ್ ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಈಗ ಸಂಘಟನೆ ನಡುವೆ ಪರ ವಿರೋಧ ಚರ್ಚೆ ಆರಂಭವಾಗಿ ಸಂಘಟನೆಯೇ ವಿಭಜನೆಯಾಗುವ ಹಂತದಲ್ಲಿದೆ ಎಂದು ಮೋಹನ್ ಇದೇ ವೇಳೆ ಹೇಳಿದರು.