ಉತ್ತರಪ್ರದೇಶ;ಯುವತಿಯೊಬ್ಬಳು ಶ್ರಿಕೃಷ್ಣ ದೇವರನ್ನು ಮದುವೆಯಾಗಿ ಸುದ್ದಿಯಾಗಿದ್ದಾರೆ.
ರಕ್ಷಾ(30) ಕಾನೂನು ಪದವಿ ವ್ಯಾಸಾಂಗ ಮಾಡುತ್ತಿದ್ದಾಳೆ. ಈಕೆ ಶ್ರೀಕೃಷ್ಣ ದೇವರನ್ನು ಶ್ರದ್ಧೆಯಿಂದ ಪೂಜಿಸುತ್ತಿದ್ದಳು. ಹೀಗಾಗಿ ಕೃಷ್ಣನ ಮೇಲಿನ ಭಕ್ತಿ ಮುಂದುವರಿಸಲು ಶ್ರೀಕೃಷ್ಣನನ್ನು ಮದುವೆಯಾಗಿದ್ದಾಳೆ.
ರಕ್ಷಾ ತಂದೆ ರಂಜಿತ್ ಸಿಂಗ್ ಸೋಲಂಕಿ ಮದುವೆ ಆಯೋಜನೆ ಮಾಡಿದ್ದಾರೆ.ಅದ್ಧೂರಿಯಾಗಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ರಕ್ಷಾಳ ಕುಟುಂಬಸ್ಥರು,ಆಪ್ತರು ಪಾಲ್ಗೊಂಡು ಆಶೀರ್ವಾದಿಸಿದ್ದಾರೆ.
ಮದುವೆ ವೇಳೆ ಆರತಿ ಬೆಳಗಿದ್ದಾರೆ.ಬಳಿಕ ಸಂಗೀತಕ್ಕೆ ಹೆಜ್ಜೆ ಹಾಕಿದ್ದಾರೆ.ಬಳಿಕ ವಧು ರಕ್ಷಾ ಕೃಷ್ಣನ ಮೂರ್ತಿಯೊಂದಿಗೆ ಸುಖಚೈನ್ಪುರ ಪ್ರದೇಶದಲ್ಲಿನ ತನ್ನ ಸಂಬಂಧಿಕರ ಮನೆಗೆ ತೆರಳಿದ್ದಾಳೆ.ಅಲ್ಲಿಂದ ಶ್ರೀಕೃಷ್ಣನ ಮೂರ್ತಿಯನ್ನು ಹೊತ್ತುಕೊಂಡು ತವರಿಗೆ ಬಂದಿದ್ದಾರೆ.
ಈ ಕುರಿತು ಮಾತನಾಡಿದ ರಕ್ಷಾ,ನನಗೆ ಬಾಲ್ಯದಿಂದಲೂ ಶ್ರೀಕೃಷ್ಣ ಮೇಲೆ ಅಪಾರವಾದ ಭಕ್ತಿ ಇದೆ.ಅನೇಕ ದಿನಗಳಿಂದ ಶ್ರೀಕೃಷ್ಣನನ್ನು ವರಿಸುವ ಬಗ್ಗೆ ಕನಸು ಕಾಣುತ್ತಿದ್ದೆ.ಇದೀಗ ಶ್ರೀಕೃಷ್ಣ ದೇವರನ್ನೇ ವರಿಸಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾಳೆ.