ತುಮಕೂರು;ಪೊಲೀಸ್ ಠಾಣೆಗೆ ನುಗ್ಗಿ ಮಹಿಳಾ ಪಿಎಸ್ಐಗೆ ಬೆದರಿಕೆ ಆರೋಪದಲ್ಲಿ ತುಮಕೂರು ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಶಶಿ ಹುಲಿಕುಂಟೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ವಿರುದ್ಧ ಪೇ ಎಂ ಎಲ್ ಎ ಪೋಸ್ಟರ್ಗಳನ್ನು ಅಂಟಿಸಿರುವ ಅರೋಪದ ಮೇಲೆ ತಿಲಕ್ ಪಾರ್ಕ್ ಪೊಲೀಸರು ಶಿವ, ಉದಯ್ ಕುಮಾರ್, ಪಾರ್ಥಸಾರಥಿ, ವರುಣ್ ಎಂಬವರನ್ನು ಬಂಧಿಸಿದ್ದರು.
ಶಶಿ ಹುಲಿಕುಂಟೆ ಆತನ ಸ್ನೇಹಿತ ಅಜರ್ ಇಬ್ಬರು ಶನಿವಾರ ರಾತ್ರಿ ಠಾಣೆಗೆ ತೆರಳಿ ಬಂಧಿತ ಆರೋಪಿಗಳೆಲ್ಲಾ ನಮ್ಮವರೇ ಅವರನ್ನು ಕೂಡಲೇ ಬಿಡುಗಡೆ ಮಾಡಿ ಎಂದು ಮಹಿಳಾ ಪಿ ಎಸ್ ಐ ರತ್ನಮ್ಮಗೆ ಆಗ್ರಹಿಸಿದ್ದರು.ಬಳಿಕ ಠಾಣೆಯಲ್ಲಿದ್ದ ಸಿಬ್ಬಂಧಿ ಸಿದ್ದಯ್ಯ ಎಂಬುವರನ್ನ ಬೆದರಿಸಿ ಬಂಧಿತ ಆರೋಪಿಗಳನ್ನ ಕರೆದೊಯ್ದಿದ್ದಾರೆ ಎಂದು ಪಿಎಸ್ ಐ ರತ್ನಮ್ಮ ಆರೋಪಿಸಿದ್ದಾರೆ.
ಈ ಕುರಿತು ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.