ಬೆಂಗಳೂರು;ಪುಲಕೇಶಿ ನಗರ ಕ್ಷೇತ್ರದ ಎಸ್ ಡಿಪಿಐ ಅಭ್ಯರ್ಥಿ ಭಾಸ್ಕರ್ ಪ್ರಸಾದ್ ಭಾವುಕ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾಸ್ಕರ್ ಪ್ರಸಾದ್ ಗೆ ಚುನಾವಣಾ ವೆಚ್ಚಕ್ಕೆ ಕ್ಷೇತ್ರದ ಮಹಿಳೆಯರು ಹಣಕಾಸಿನ ನೆರವು, ಉಂಗುರ ಸೇರಿ ನೆರವನ್ನು ನೀಡಿದ್ದಾರೆ.
ವಿಡಿಯೋದಲ್ಲಿ ಓರ್ವ ಮಹಿಳೆ ಗೆದ್ದು ಬಂದು ಡಿಜೆ ಹಳ್ಳಿ ಗಲಭೆ ಕೇಸ್ ನಲ್ಲಿ ಅನ್ಯಾಯವಾಗಿ ಬಂಧಿತರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಇನ್ನು ಕೆಲವರು ನಮ್ಮ ಮುಸ್ಲಿಮರಿಗೆ ಏನೇ ಸಮಸ್ಯೆಯಿದ್ದರೂ ಅದನ್ನು ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ತನಗೆ ನೆರವು ನೀಡಿದ ಮಹಿಳೆಯರ ಮುಂದೆ ಭಾಸ್ಕರ್ ಪ್ರಸಾದ್ ಈ ವೇಳೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ಜೊತೆಗೆ ಮಹಿಳೆಯ ಕಾಲಿಗೆ ನಮಸ್ಕರಿಸಿ ಧನ್ಯತಾ ಭಾವವನ್ನು ತೋರಿದ್ದಾರೆ.
ಪುಲಕೇಶಿ ನಗರ ಕ್ಷೇತ್ರದಲ್ಲಿ ಈ ಬಾರಿ ಭಾರೀ ಫೈಪೋಟಿ ಇದ್ದು ಎಸ್ ಡಿಪಿಐನಿಂದ ಭಾಸ್ಕರ್ ಪ್ರಸಾದ್ ಕಣದಲ್ಲಿದ್ದಾರೆ.
ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಕೊಟ್ಟಿಲ್ಲ. ಮಹದೇವಪುರದ ಎಸಿ ಶ್ರೀನಿವಾಸ ಅವರನ್ನು ಕಣಕ್ಕಿಳಿಸಿದೆ. ಇದರಿಂದ ಅಸಮಾಧಾನಗೊಂಡು ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಟಿಕೆಟ್ನಲ್ಲಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಇದೆ.