ಮಂಗಳೂರು; ಹಿಂದೂ ಸಂಘಟನೆಯ ಮುಖಂಡನಿಗೆ ಕೊಟ್ಟ ಭದ್ರತೆ ವಾಪಾಸ್ಸು ಪಡೆದ ರಾಜ್ಯ ಸರಕಾರ

ಮಂಗಳೂರು:ಹಿಂದೂ ಸಂಘಟನೆ ಮುಖಂಡ ಸತ್ಯಜಿತ್ ಸುರತ್ಕಲ್ ಗೆ ನೀಡಿದ್ದ ಗನ್ ಮ್ಯಾನ್ ಭದ್ರತೆಯನ್ನು ರಾಜ್ಯ ಸರಕಾರ ವಾಪಾಸ್ಸು ಪಡೆದುಕೊಂಡಿದೆ.

2000 ಇಸವಿಯ ಬಳಿಕ ಅವರಿಗೆ ಭದ್ರತೆ ನೀಡಲಾಗುತ್ತಿತ್ತು ಎನ್ನಲಾಗಿದೆ.ಇದೀಗ ಹಲವು ವರ್ಷಗಳ ನಂತರ ರಾಜ್ಯ ಸರ್ಕಾರ ಅವರಿಗೆ ಕೊಟ್ಟಿದ್ದ ಭದ್ರತೆ ವಾಪಸ್ ಪಡೆದಿದೆ.

ಇದ್ದ ಗನ್ ಮ್ಯಾನ್ ಭದ್ರತೆಯನ್ನು ಜೀವ ಭಯ ಇರುವುದಿಲ್ಲ ಎಂದು ಸರ್ಕಾರ ವಾಪಸ್ ಪಡೆದಿದೆ ಎಂದು ಸತ್ಯಜಿತ್ ಸುರತ್ಕಲ್ ತಿಳಿಸಿದ್ದಾರೆ.

ಬಿಜೆಪಿ ಸರಕಾರದ ಅವಧಿಯಲ್ಲಿ ಹಿಂದೂ ಮುಖಂಡನಿಗೆ ಕೊಟ್ಟಿರುವ ಭದ್ರತೆ ವಾಪಾಸ್ಸಾತಿ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ.

ಟಾಪ್ ನ್ಯೂಸ್