ರಿಯಾದ್;ಬಂಟ್ವಾಳದ ಸಜಿಪ ನಿವಾಸಿ ಯುವಕ ರಿಯಾದ್ ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ರಿಯಾದ್ನ ಬತ್ಹ ಸಮೀಪದ ದಬಾಬ್ ಸ್ಟ್ರೀಟ್ನಲ್ಲಿ
ಮಸೀದಿಗೆ ಹೋಗಲು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟು ಸಜಿಪ ಕೋಟೆಕಣಿ ಮೂಲದ ಖಾಸಿಮ್ ಮತ್ತು ಝೈನಬಾ ದಂಪತಿಗಳ ಪುತ್ರ ಸಿರಾಜುದ್ದೀನ್(30) ಮೃತಪಟ್ಟಿದ್ದಾರೆ.
ನಿನ್ನೆ ಸಂಜೆ 6.30 ಸುಮಾರಿಗೆ ಈ ಘಟನೆ ನಡೆದಿದ್ದು,
ಸಿರಾಜುದ್ದೀನ್ ಜೊತೆ ರಸ್ತೆ ದಾಟುತ್ತಿದ್ದ ಉಪ್ಪಳ ಮೂಲದ ಮಹಮ್ಮದ್ ಅಯಾಝ್ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದೆ.ಅವರನ್ನು ಕಿಂಗ್ ಫಹದ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಸಿರಾಜುದ್ದೀನ್ ಹೌಸ್ ಡ್ರೈವರ್ ಆಗಿ ರಿಯಾದ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ನಿನ್ನೆ ಮಗ್ರಿಬ್ ನಮಾಝ್ ನಿರ್ವಹಿಸಲು ಮಸೀದಿಗೆ ತೆರಳಲು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಸಿರಾಜುದ್ದೀನ್ ಮತ್ತು ಅಯಾಝ್ಗೆ ಡಿಕ್ಕಿ ಹೊಡೆದಿದೆ.ಸಿರಾಜುದ್ದೀನ್ ಸ್ಥಳದಲ್ಲೇ ಮೃತಪಟ್ಟಿದ್ದು ಮೃತದೇಹವನ್ನು ಶುಮೈಸಿ ಆಸ್ಪತ್ರೆಯಲ್ಲಿರಿಸಲಾಗಿದೆ.