ಪುತ್ತೂರು:ಯುವತಿಗೆ ಮೇಲೆ ಚಾಕು ಇರಿದ ಘಟನೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ನಡೆದಿದೆ.
ವಿಟ್ಲ ಸಮೀಪದ ಅಳಿಕೆಯ ಗೌರಿ (25) ಮೇಲೆ ಯುವಕನೋರ್ವ ಚೂರಿಯಿಂದ ಇರಿದು ಪರಾರಿಯಾಗಿದ್ದ.ಆರೋಪಿಗೆ ಪದ್ಮರಾಜ್ ಎಂದು ಗುರುತಿಸಲಾಗಿದೆ.ಆತನಿಗೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಗಂಭೀರ ಗಾಯಗೊಂಡ ಯುವತಿಯನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಸರ್ಕಾರಿ ಬಸ್ ನಿಲ್ದಾಣದ ಬಳಿಯ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿಗೆ ಸರಪಾಡಿ ಮೂಲದ ಯುವಕ ಚಾಕು ಇರಿದಿದ್ದಾನೆ.
ಬೈಕ್ ನಲ್ಲಿ ಬಂದಿದ್ದ ಯುವಕ, ಯುವತಿಯನ್ನು ತಡೆದು ಚೂರಿಯಲ್ಲಿ ಇರಿದಿದ್ದಾನೆ.
ಸ್ಥಳದಲ್ಲಿರುವ ಸಿಸಿಟಿವಿ ಆಧರಿಸಿ ಪುತ್ತೂರು ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.