ಪುತ್ತೂರಿನಲ್ಲಿ “ಪುತ್ತಿಲ ಪರಿವಾರ” ಘೋಷಣೆ; ಏನಿದು ಬಿಜೆಪಿಗರ ನಿದ್ದೆಗೆಡಿಸಿದ ಬೆಳವಣಿಗೆ?

ಪುತ್ತೂರು;ಪುತ್ತೂರಿನಲ್ಲಿ ಬಿಜೆಪಿ ಜೊತೆಗಿನ‌ ಅರುಣ್ ಕುಮಾರ್ ಪುತ್ತಿಲ ಅವರ ಪೈಟ್ ಮುಂದುವರಿದಿದೆ.
ಅರುಣ್ ಪುತ್ತಿಲ ಹೊಸ ಸಂಘಟನೆ ಘೋಷಣೆ ಮಾಡಿದ್ದಾರೆ.

ಹಿಂದುತ್ವದ ಹೆಸರಲ್ಲೇ ಸಂಘಟನೆ ಕಟ್ಟಿ ಬಿಜೆಪಿಗೆ ಮತ್ತೆ ಸವಾಲು ಹಾಕಿರುವ ಪುತ್ತಿಲ, ಹಿಂದುತ್ವದ ಶಕ್ತಿಕೇಂದ್ರದಲ್ಲೇ ಹೊಸ ಸಂಘಟನೆ ಸ್ಥಾಪಿಸಿದ್ದಾರೆ.

ಪುತ್ತೂರಿನಲ್ಲಿ ನಡೆದ ಸೇವಾ ಸಮರ್ಪಣಾ ಸಮಾವೇಶದಲ್ಲಿ ಅಧಿಕೃತವಾಗಿ ‘ಪುತ್ತಿಲ ಪರಿವಾರ’ ಸಂಘಟನೆ ಘೋಷಣೆ ಮಾಡಲಾಗಿದೆ.

ಆರ್.ಎಸ್.ಎಸ್ ವಿರುದ್ದವೇ ಅರುಣ್ ಪುತ್ತಿಲ ಅವರ ಈ ನಡೆ ಅಚ್ಚರಿಯನ್ನುಂಟುಮಾಡಿದೆ.ಸಂಘಟನೆಯಲ್ಲಿ ಪರಿವಾರ ಎಂಬ ಹೆಸರೂ ಇರುವುದು ಹಲವರ ಹುಬ್ಬೇರಿಸಿದೆ.

ಸಂಘಪರಿವಾರದ ಹಲವು ಕಾರ್ಯಕರ್ತರು ‘ಪುತ್ತಿಲ ಪರಿವಾರ’ ಪರವಾಗಿ ಪ್ರಚಾರಕ್ಕಿಳಿದಿದ್ದು, ಸಾವಿರಾರು ಕಾರ್ಯಕರ್ತರ ಸಮ್ಮುಖ ‘ಪುತ್ತಿಲ ಪರಿವಾರ’ ಲೋಗೋ ಲೋಕಾರ್ಪಣೆಗೊಳಿಸಲಾಗಿದೆ.

ಲೋಕಸಭಾ ಚುನಾವಣೆಗೆ ಮೊದಲು ನಡೆದ ಈ ಬೆಳವಣಿಗೆ ಬಿಜೆಪಿಗೆ ನುಂಗಲಾರದ ತುತ್ತಾಗುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿದೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com