ನಶೀಮ್ ಖುರೇಶಿ ಕೊಲೆಯಾದ ವ್ಯಕ್ತಿ
ಬಿಹಾರ;ಗೋಮಾಂಸ ಸಾಗಾಟದ ಶಂಕೆಯಲ್ಲಿ ಗುಂಪು ವ್ಯಕ್ತಿಯೋರ್ವನನ್ನು ಥಳಿಸಿ ಹತ್ಯೆಗೈದ ಘಟನೆ ಬಿಹಾರದ ಸರಣ್ ಜಿಲ್ಲೆಯಲ್ಲಿ ನಡೆದಿದೆ.
ಸಿವಾನ್ ಜಿಲ್ಲೆಯ ಹಸನ್ಪುರ ಪೊಲೀಸ್ ಠಾಣೆಯ ನಿವಾಸಿ
ನಶೀಮ್ ಖುರೇಶಿ ಕೊಲೆಯಾದ ವ್ಯಕ್ತಿ.
ಖುರೇಶಿ ಹಾಗೂ ಅವರ ಸೋದರಳಿಯ ರಸೂಲ್ಪುರದ ಮೂಲಕ ಜೋಗಿಯಾ ಗ್ರಾಮಕ್ಕೆ ತೆರಳುತ್ತಿದ್ದರು.ಈ ವೇಳೆ ಬ್ಯಾಗ್ನಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಶಂಕಿಸಿ ಗ್ರಾಮಸ್ಥರ ಗುಂಪೊಂದು ಅವರನ್ನು ತಡೆದು ನಿಲ್ಲಿಸಿದೆ.ಗೋಮಾಂಸವನ್ನು ತೋರಿಸುವಂತೆ ಆಗ್ರಹಿಸಿದ್ದಾರೆ.ಆದರೆ ಅವರು ಬ್ಯಾಗ್ ತೋರಿಸಲು ನಿರಾಕರಿಸಿದಾಗ ಗ್ರಾಮಸ್ಥರು ಅವರ ಮೇಲೆ ಬಿದಿರಿನ ಬೆತ್ತ ಹಾಗೂ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಗೋಮಾಂಸ ಸಾಗಾಟದ ಶಂಕೆಯಲ್ಲಿ ವ್ಯಕ್ತಿಯೋರ್ವನನ್ನು 12ಕ್ಕೂ ಅಧಿಕ ಗ್ರಾಮಸ್ಥರ ಗುಂಪೊಂದು ಥಳಿಸಿ ಹತ್ಯೆಗೈದಿದೆ. ಈ ಘಟನೆಯ ಕುರಿತು ಮಾಹಿತಿ ದೊರಕಿದ ತಕ್ಷಣ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ರಸೂಲ್ಪುರ ಪೊಲೀಸ್ ಠಾಣೆಯ ಮೇಲ್ವಿಚಾರಣಾ ಅಧಿಕಾರಿ ಆರ್.ಸಿ.ತಿವಾರಿ ಅವರು ತಿಳಿಸಿದ್ದಾರೆ.