ಸಹಪಾಠಿಗೆ ಹಲ್ಲೆ ಪ್ರಕರಣ: ರೈತ ಮುಖಂಡ ನರೇಶ್ ಟಿಕಾಯಿತ್ ಮಧ್ಯಪ್ರವೇಶ, ಮುಸ್ಲಿಂ ವಿದ್ಯಾರ್ಥಿಗೆ ಆಲಿಂಗಿಸಿದ ಹಲ್ಲೆ ನಡೆಸಿದ ವಿದ್ಯಾರ್ಥಿ

ಉತ್ತರಪ್ರದೇಶ;ಮುಜಾಫರ್ ನಗರ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಹೊಡೆಯುವಂತೆ ಇತರ ಸಹಪಾಠಿಗಳಿಗೆ ಸೂಚಿಸಿದ ಶಿಕ್ಷಕಿಯ ವಿಡಿಯೋ ದೇಶದಲ್ಲಿ ಸಂಚಲನ ಮೂಡಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ನರೇಶ್ ಟಿಕಾಯಿತ್ ಮಧ್ಯಪ್ರವೇಶಿಸಿದ್ದು, ಘಟನೆ ನಡೆದ ಖುಬ್ಬಾಪುರ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತ ವಿದ್ಯಾರ್ಥಿಯ ಕುಟುಂಬಸ್ಥರನ್ನು ಭೇಟಿ ಮಾಡಿದರು.

ಘಟನೆಯಿಂದ ಪರಸ್ಪರ ಪ್ರೀತಿಯ ವಾತಾವರಣ ಕೆಡವಲು ಬಿಡುವುದಿಲ್ಲ. ಆರೋಪಿ ಶಿಕ್ಷಕಿ ಮತ್ತು ಶಾಲೆಯ ವಿರುದ್ಧ ಕ್ರಮ ಕೈಗೊಳ್ಳದ ಸರಕಾರ ಕೋಮಾದಲ್ಲಿದೆ. ಇಂತಹ ಘಟನೆ ಮರುಕಳಿಸಬಾರದು ಎಂದು ಹೇಳಿದ್ದಾರೆ.

ಕಪಾಳಮೋಕ್ಷ ಮಾಡಿದ್ದ ವಿದ್ಯಾರ್ಥಿ ಮತ್ತು ಮುಸ್ಲಿಂ ವಿದ್ಯಾರ್ಥಿಯನ್ನು ಅವರು ಪರಸ್ಪರ ಆಲಿಂಗಿಸುವಂತೆ ಸೂಚಿಸಿದರು. ಆ ಮೂಲಕ ಗ್ರಾಮದ ಜನರಲ್ಲಿ ಮನಸ್ತಾಪ ಮುಂದುವರೆಯದಂತೆ ನರೇಶ್‌ ಟೀಕಾಯತ್‌ ಶ್ರಮಿಸಿದ್ದಾರೆ.

ಮಕ್ಕಳಿಬ್ಬರು ಅಪ್ಪಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ