ಮೈಸೂರು; ತಂದೆ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆಯಲ್ಲಿ ನಡೆದಿದೆ.
ಜಕ್ಕಳ್ಳಿ ನಿವಾಸಿ ತಂದೆ ನಾಗೇಗೌಡ (55), ಪುತ್ರ ಮಧು (24) ಆತ್ಮಹತ್ಯೆಗೆ ಶರಣಾದವರು.ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಪ್ಪ ನೇಣು ಬಿಗಿದುಕೊಂಡಿದ್ದಾನೆ. ತಂದೆ ಸಾವಿನ ಸುದ್ದಿ ತಿಳಿದು ಮನನೊಂದ ಮಗ ಮಧು ತಡರಾತ್ರಿ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ.
ಸುದ್ದಿ ತಿಳಿದು ಸಂಬಂಧಿಕರು ಬಂದು ಅಪ್ಪ-ಮಗನನ್ನು
ಒಂದೇ ಜಾಗದಲ್ಲಿ ಏಕಕಾಲದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ.
ಈ ಕುರಿತು ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.