BREAKING; ಮಾಜಿ ಸಚಿವರ ಸೋದರಳಿಯ ಹಾಗೂ ಆತನ ಸ್ನೇಹಿತ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ;26ರ ಹರೆಯದ ಇಬ್ಬರ ಸಾವು ಹುಟ್ಟು ಹಾಕಿದ ಹಲವು ಸಂಶಯ

ಮಹಾರಾಷ್ಟ್ರ; ಮಾಜಿ ಕೇಂದ್ರ ಸಚಿವ ಹಂಸರಾಜ್ ಅಹಿರ್ ಅವರ ಸೋದರಳಿಯ ಮಹೇಶ್ ಅಹಿರ್ (26) ಮತ್ತು ಅವರ ಆಪ್ತ ಸ್ನೇಹಿತ ಹರೀಶ್ ಧೋಟೆ (27) ಮಧ್ಯಾಹ್ನ ಚಂಡೀಗಢದ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇಬ್ಬರೂ ಮಹಾರಾಷ್ಟ್ರದ ಚಂದ್ರಾಪುರ ನಿವಾಸಿಗಳಾಗಿದ್ದರು ಎಂದು ತಿಳಿದು ಬಂದಿದೆ.ಮಾರ್ಚ್ 14 ರಂದು ಉಜ್ಜಯಿನಿಗೆ ಹೋಗುವುದಾಗಿ ಹೇಳಿ ಇಬ್ಬರೂ ಮನೆಯಿಂದ ಹೊರಟಿದ್ದರು ಎಂದು ಮೂಲಗಳು ತಿಳಿಸಿವೆ.ಆದರೆ ಅವರು ಉಜ್ಜಯಿನಿಗೆ ತೆರಳಲಿಲ್ಲ.

ಇಬ್ಬರ ಸುಳಿವು ಇಲ್ಲದ ಕಾರಣ ಕುಟುಂಬದ ಸದಸ್ಯರು ಮಾರ್ಚ್ 15 ರಂದು ಚಂದ್ರಾಪುರ ಪೊಲೀಸರಿಗೆ ಕಾಣೆಯಾದ ಬಗ್ಗೆ ದೂರನ್ನು ಸಲ್ಲಿಸಿದ್ದರು.

ಪೊಲೀಸರು ಹರಿದ್ವಾರದಲ್ಲಿ ಅವರ ಮೊಬೈಲ್ ಲೊಕೇಶನ್ ಪತ್ತೆಹಚ್ಚಿದರು ಮತ್ತು ಕುಟುಂಬದ ಸದಸ್ಯರು ಹುಡುಕಾಟ ನಡೆಸಿಕೊಂಡು ಉತ್ತರಾಖಂಡಕ್ಕೂ ತೆರಳಿದ್ದರು.

ಮಹೇಶ್ ಅವರು ಮಾಜಿ ಸಚಿವ ಹಂಸರಾಜ್ ಅಹಿರ್ ಅವರ ಹಿರಿಯ ಸಹೋದರ ಹರಿಶ್ಚಂದ್ರ ಅಹಿರ್ ಅವರ ಮಗ.

ಚಂಡೀಗಢ ಪೊಲೀಸರ ಪ್ರಕಾರ, ಸೆಕ್ಟರ್ 52 ರ ಅರಣ್ಯದ ಪ್ಯಾಚ್‌ನಲ್ಲಿ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಇಬ್ಬರು ವ್ಯಕ್ತಿಗಳು ಮರಗಳಿಗೆ ನೇತಾಡುತ್ತಿರುವುದನ್ನು ದಾರಿಹೋಕ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು, ಅವರು ಇಬ್ಬರನ್ನು ಸರ್ಕಾರಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಬರುವಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

ಮೃತ ವ್ಯಕ್ತಿಯ ಪ್ರಯಾಣದ ಟಿಕೆಟ್‌ಗಳನ್ನು ಪೊಲೀಸರು ಪತ್ತೆ
ಹಚ್ಚಿದ್ದು, ಬುಧವಾರ ಬೆಳಗ್ಗೆ ಡೆಹ್ರಾಡೂನ್‌ನಿಂದ ಬಸ್‌ನಲ್ಲಿ ಇಬ್ಬರೂ ಚಂಡೀಗಢ ತಲುಪಿದ್ದಾರೆ ಎಂದು ಸೂಚಿಸಿದೆ. ಸ್ಥಳದಲ್ಲಿ ಮದ್ಯದ ಬಾಟಲಿ ಮತ್ತು ಗ್ಲಾಸ್‌ಗಳು ಪತ್ತೆಯಾಗಿದೆ.

ಸ್ಥಳದಲ್ಲಿ ದೊರೆತ ದಾಖಲೆಗಳಿಂದ ಇಬ್ಬರ ಗುರುತು ಪತ್ತೆ ಹಚ್ಚಿದ ಪೊಲೀಸರು ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದಾರೆ. ಸಂಬಂಧಿಕರ ಆಗಮನದ ನಂತರ ಇಂದು ಮರಣೋತ್ತರ ಪರೀಕ್ಷೆ ನಡೆಸುವ ಸಾಧ್ಯತೆಯಿದೆ.

ಚಂಡೀಗಢ ಪೊಲೀಸರು ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ವಿಚಾರಣೆ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದಾರೆ.
ದೇಹಗಳ ಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ನೈಋತ್ಯ ವಿಭಾಗದ ಡಿಎಸ್ಪಿ ಚರಂಜೀತ್ ಸಿಂಗ್ ವಿರ್ಕ್ ಹೇಳಿದ್ದಾರೆ.

ಸೆಕ್ಟರ್ 43ರ ಅಂತರರಾಜ್ಯ ಬಸ್ ಟರ್ಮಿನಲ್ ಬಳಿಯ ಅಂಗಡಿಯಿಂದ ಪಡೆದ ಸಿಸಿಟಿವಿ ದೃಶ್ಯಾವಳಿಗಳು ಇಬ್ಬರು ವ್ಯಕ್ತಿಗಳು ಹಗ್ಗಗಳನ್ನು ಖರೀದಿಸುತ್ತಿರುವುದನ್ನು ತೋರಿಸಿದೆ. ನಾವು ಎಲ್ಲಾ ಕೋನಗಳಿಂದ ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ ಎಂದು ಡಿವೈಎಸ್ಪಿ ಹೇಳಿದ್ದಾರೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರ್ ಪತ್ನಿಗೆ ನಾನು ಕೆಲಸ ಕೊಡುತ್ತೇನೆ, ನಳಿನ್ ಕುಮಾರ್ ರಾಜೀನಾಮೆ ಕೊಡಲಿ- ಪ್ರತಿಭಾ ಕುಳಾಯಿ ಏನೆಲ್ಲಾ ಹೇಳಿದ್ರು?

ಮಂಗಳೂರು:ನಳಿನ್ ಕುಮಾರ್ ಕಟೀಲ್ ವಿರುದ್ಧ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ವಾಗ್ದಾಳಿ ನಡೆಸಿದ್ದಾರೆ.

Developed by eAppsi.com