ಕಾನೂನು ಬಾಹಿರ ಚಟುವಟಿಕೆ ಆರೋಪಿಸಿ ಎರಡು ಮದರಸಾಗಳ ನೆಲಸಮ, ಪ್ರಾಂಶುಪಾಲ ಸೇರಿ ಮೂವರ ಬಂಧನ

ಅಸ್ಸಾಂ;ಬಾರ್ಪೇಟಾ ಜಿಲ್ಲೆಯಲ್ಲಿ ಮದರಸಾವನ್ನು ಸೋಮವಾರ ನೆಲಸಮ ಮಾಡಲಾಗಿದೆ,ಅದನ್ನು ಅಕ್ರಮವಾಗಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿಲಾಗಿದೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

ಬಾರ್ಪೇಟಾದ ಧಕಾಲಿಯಾಪರಾ ಪ್ರದೇಶದಲ್ಲಿರುವ ಶೈಖುಲ್ ಹಿಂದ್ ಮಹಮ್ಮದುಲ್ ಹಸನ್ ಜಾಮಿಯುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯನ್ನು ಪೊಲೀಸರು ಮತ್ತು ಆಡಳಿತ ಮಂಡಳಿ ಧ್ವಂಸಗೊಳಿಸಿದೆ.

ಅದರ ಪ್ರಾಂಶುಪಾಲ ಮಹ್ಮುನೂರ್ ರಶೀದ್​​,ಅಕ್ಬರ್ ಅಲಿ ಮತ್ತು ಅಬುಲ್ ಕಲಾಂ ಆಜಾದ್ ಎಂಬವರನ್ನು ಪೊಲೀಸರು ಸೊರ್ಭೋಗ್ ಪ್ರದೇಶದ ಮನೆಯೊಂದರಿಂದ ಬಂಧಿಸಿದ್ದಾರೆ.

ಇವರು ಅಲ್-ಖೈದಾ ಮತ್ತು ಅನ್ಸರುಲ್ಲಾ ಬಾಂಗ್ಲಾದೇಶದ ತಂಡ (ಎಬಿಟಿ) ಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಲಾಗಿದೆ.

ಅಲ್-ಖೈದಾ ಜೊತೆ ಸಂಪರ್ಕ ಹೊಂದಿರುವ ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಗುಂಪು ಅನ್ಸರುಲ್ಲಾ ಬಾಂಗ್ಲಾ ಟೀಮ್ (ABT) ಯ ವಿರುದ್ಧ ಅಸ್ಸಾಂನಲ್ಲಿ ಪೊಲೀಸರು ಕಾರ್ಯಾಚರಣೆಯನ್ನು ಹೆಚ್ಚಿಸಿದ ನಂತರ ಈ ತಿಂಗಳು ಕೆಡವಲಾಗುತ್ತಿರುವ ಎರಡನೇ ಮದರಸಾ ಇದಾಗಿದೆ.

ಆಗಸ್ಟ್ 4 ರಂದು,ಮಧ್ಯ ಅಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ ಖಾಸಗಿ ಮದರಸಾವನ್ನು ಬುಲ್ಡೋಜರ್‌ಗಳ ಬಳಕೆಯಿಂದ ಕೆಡವಲಾಗಿದೆ‌‌.ಅಲ್ಲಿ ಕೆಲಸ ಮಾಡುವ ಶಿಕ್ಷಕರನ್ನು ಎಬಿಟಿ ಮಾಡ್ಯೂಲ್‌ನ ಭಾಗವಾಗಿರುವ ಆರೋಪದ ಮೇಲೆ ಬಂಧಿಸಲಾಗಿದೆ.

ಸೋಮವಾರ ಬರ್ಪೇಟಾ ಜಿಲ್ಲೆಯ ಢಕಾಲಿಯಾಪಾರದಲ್ಲಿರುವ ಮದರಸಾವನ್ನು ಬುಲ್ಡೋಜರ್‌ಗಳಿಂದ ಧ್ವಂಸಗೊಳಿಸಲಾಗಿದೆ‌.

ಟಾಪ್ ನ್ಯೂಸ್