ಕಾಸರಗೋಡು;ಕುಂಬಳೆ ಬಸ್ ನಿಲ್ದಾಣದ ಬಳಿ ಗುಂಪೊಂದು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.ಹೊಡೆದಾಡಿಕೊಂಡವರ ಗುಂಪು ವಿಧ್ಯಾರ್ಥಿಗಳದ್ದು ಎಂದು ತಿಳಿದು ಬಂದಿದೆ.
SSLC ಪರೀಕ್ಷೆ ಮುಗಿದು ಪೇಟೆಗೆ ತಲುಪಿದ ಹತ್ತನೇ ವಿದ್ಯಾರ್ಥಿಗಳ ಹಾಗೂ ಒಂಬತ್ತನೇ ತರಗತಿ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ನಡೆದಿದೆ ಎಂದು ವರದಿಯಾಗಿದೆ.
ಈ ಮೊದಲು ಕೂಡ ವಿದ್ಯಾರ್ಥಿಗಳು ಇದೇ ರೀತಿ ಹೊಡೆದಾಟ ನಡೆಸಿದ್ದು, ಕೆಲವರನ್ನು ಡಿಬಾರ್ ಮಾಡಲಾಗಿತ್ತು ಎನ್ನಲಾಗಿದೆ.