ತೆಲಂಗಾಣ;ಪೋಲೀಸ್ ಕಸ್ಟಡಿಯಲ್ಲಿ ಹಲ್ಲೆಯಿಂದ 36 ವರ್ಷದ ದೈನಂದಿನ ಕೂಲಿ ಕಾರ್ಮಿಕ ಖದೀರ್ ಖಾನ್ ಮೇಡಕ್ ಜಿಲ್ಲೆಯಲ್ಲಿ ಮೃತಪಟ್ಟಿದ್ದು, ಪ್ರಕರಣ ಬಾರೀ ಟೀಕೆಗೆ ಕಾರಣವಾಗಿದೆ
ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬರುವ ಚೈನ್ ಕಳ್ಳನೆಂದು ಅಮಾಯಕ ಕೂಲಿ ಕಾರ್ಮಿಕ ಖದೀರ್ ಗೆ ಬಂಧಿಸಲಾಗಿತ್ತು.
ಬಂಧನವಾಗಿದ್ದ ಐದು ದಿನಗಳ ನಂತರ ಖದೀರ್ ಹೈದರಾಬಾದ್ನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾದರು.ಸಾವಿಗೂ ಮುನ್ನ ತೆಗೆದ ವಿಡಿಯೋ ಹೇಳಿಕೆಯಲ್ಲಿ ಖದೀರ್ ತನಗೆ ನೀಡಿದ ಚಿತ್ರಹಿಂಸೆಯನ್ನು ವಿವರಿಸಿದ್ದಾನೆ.
ಈ ಬಗ್ಗೆ ತನಿಖೆ ವೇಳೆ ಪೊಲೀಸರಿಗೆ ಕೂಡ ಖದೀರ್ ಅಮಾಯಕ ಎನ್ನುವುದು ಬಯಲಾಗಿದೆ. ಇದೀಗ ಖದೀರ್ ಸಾವಿನ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.