ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿ ಸಿ ಬಿ ರಿಷ್ಯಂತ್ ನೇಮಕ; 15 IPS ಅಧಿಕಾರಿಗಳ ವರ್ಗಾವಣೆ, ಯಾರೆಲ್ಲಾ ವರ್ಗಾವಣೆಯಾಗಿದೆ? ಇಲ್ಲಿದೆ ಪಟ್ಟಿ..

ಬೆಂಗಳೂರು;15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಪಟ್ಟಿಯಲ್ಲಿ ದಕ್ಷಿಣ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಐಪಿಎಸ್ ಅಧಿಕಾರಿ ಸಿ ಬಿ ರಿಷ್ಯಂತ್ ನೇಮಕ ಮಾಡಲಾಗಿದೆ.

ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿಕ್ರಮ್ ಅಮ್ಟೆ ಅವರು ವೈದ್ಯಕೀಯ ರಜೆಯಲ್ಲಿ ತೆರಳಿದ ಹಿನ್ನಲೆಯಲ್ಲಿ ಸಿ ಬಿ ರಿಷ್ಯಂತ್ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದರು.

2013ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ರಿಷ್ಯಂತ್ ಅವರು ಈ ಹಿಂದೆ ದಾವಣಗೆರೆಯ ಎಸ್ಪಿ ಸೇರಿದಂತೆ ಹಲವೆಡೆ ಕೆಲಸ ಮಾಡಿದ್ದರು.

ವರ್ಗಾವಣೆ ಗೊಂಡ ಪೊಲೀಸ್ ಅಧಿಕಾರಿಗಳ ಪಟ್ಟಿ
ರಾಮಚಂದ್ರ ರಾವ್ (ಪೊಲೀಸ್ ಗೃಹ ನಿರ್ಮಾಣ ನಿಗಮದ ಎಡಿಜಿಪಿ)
2. ಮಾಲಿನಿ ಕೃಷ್ಣಮೂರ್ತಿ (ಬಂಧಿಖಾನೆ ಎಡಿಜಿಪಿ)
3. ಅರುಣ್ ಚಕ್ರವರ್ತಿ (ಡಿಸಿಆರ್​ಇ, ಎಡಿಜಿಪಿ)
4. ಮನೀಷ್ ಕರ್ಬಿಕರ್ (ಸಿಐಡಿ, ಎಡಿಜಿಪಿ)
5. ಚಂದ್ರಶೇಖರ್ (ಐಎಸ್​ಡಿ, ಎಡಿಜಿಪಿ)
6. ವಿಪುಲ್ ಕುಮಾರ್ (ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ನಗರ ಪೂರ್ವ ವಲಯ)
7. ಪ್ರವೀಣ್ ಮಧುಕರ್ ಪವಾರ್ (ಐಜಿಪಿ, ಸಿಐಡಿ)

8. ಸತೀಶ್ ಕುಮಾರ್ (ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ನಗರ ಪಶ್ಚಿಮ ವಲಯ)
9. ಸಂದೀಪ್ ಪಾಟಿಲ್ (ಕೆಎಸ್‌ಆರ್​ಪಿ, ಐಜಿಪಿ)
10. ವಿಕಾಸ್ ಕುಮಾರ್ ವಿಕಾಸ್ (ಐಎಎಸ್​ಡಿ, ಐಜಿಪಿ)
11. ರಮಣ್ ಗುಪ್ತಾ (ಬೆಳಗಾವಿ ವಲಯ ಐಜಿಪಿ)
12. ಸಿದ್ದರಾಮಪ್ಪ (ಕೇಂದ್ರ ಕಚೇರಿ ಐಜಿಪಿ)
13. ಬೋರಲಿಂಗಯ್ಯ (ಮೈಸೂರು ವಲಯ ಡಿಐಜಿ)
14. ವಂಶಿಕೃಷ್ಣ (ಡಿಐಜಿ, ಸಿಐಡಿ)
15. ರಿಷ್ಯಂತ್ (ದಕ್ಷಿಣ ಕನ್ನಡ ಎಸ್​ಪಿ)

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ