ಫ್ರೀ ಬಸ್ ಹತ್ತಲು ಮಹಿಳೆಯರಿಂದ ನೂಕುನುಗ್ಗಲು, ಕಿತ್ತು ಬಂದ ಡೋರ್
ಚಾಮರಾಜನಗರ:ಬಸ್ ಹತ್ತಲು ಮಹಿಳೆಯರ ನೂಕುನುಗ್ಗಲು ಉಂಟಾಗಿ ಬಸ್ ಬಾಗಿಲು ಮುರಿದು ಬಂದಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮಣ್ಣೆತ್ತಿನ ಅಮಾವಸ್ಯೆ ಹಿನ್ನೆಲೆಯಲ್ಲಿ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಮಹದೇಶ್ವರ ಬೆಟ್ಟದತ್ತ ಹೊರಟ್ಟಿದ್ದರು. ಈ ವೇಳೆ ಬಸ್ ನಲ್ಲಿ ಸಂಚಾರ ದಟ್ಟಣೆ ಆಗಿದ್ದ ಕಾರಣ ನಾ ಮುಂದು ತಾ ಮುಂದು ಎಂದು ಬಸ್ ಹತ್ತಲು ಮಹಿಳೆಯರು ಮುಂದಾಗಿದ್ದಾರೆ.
ಈ ವೇಳೆ ಬಾಗಿಲು ಮುರಿದು ಬಿದ್ದಿದೆ.ಏಕಾಏಕಿ ಬಸ್ ಡೋರ್ ಮುರಿದು ಬಂದ ಕಾರಣ ಬಸ್ ಕಂಡಕ್ಟರ್ ದಿಕ್ಕು ತೋಚದೆ ಪೆಚ್ಚು ಮೋರೆ ಹಾಕಿಕೊಂಡು ನಿಂತಿದ್ದ ದೃಶ್ಯ ಕಂಡು ಬಂದಿದೆ.
ಬಾಗಿಲನ್ನು ಕಂಡೆಕ್ಟರ್ ಕೈಯಲ್ಲಿ ಹಿಡಿದುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಸರಕಾರ ಫ್ರೀ ಬಸ್ ಪ್ರಯಾಣ ಸೇವೆ ಒದಗಿಸಿ ಒಂದು ವಾರ ಸಮೀಪಿಸಿದೆ.ಮಹಿಳೆಯರು ಉಚಿತ ಪ್ರಯಾಣದ ಹಿನ್ನೆಲೆ ಖಾಸಗಿ ಬಸ್ ಗಿಂತ ಸರಕಾರಿ ಬಸ್ ಗಳಲ್ಲೇ ಪ್ರಯಾಣಿಸುತ್ತಿದ್ದಾರೆ.ಇದರಿಂದ ಸರಕಾರಿ ಬಸ್ ಗಳಲ್ಲಿ ಜನಸಂದಣಿ ಹೆಚ್ಚಾಗಿದೆ.