BREAKING ದುಬೈಗೆ ತೆರಳುತ್ತಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ; ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಹೊಸದಿಲ್ಲಿ:ದುಬೈಗೆ ತೆರಳುತ್ತಿದ್ದ ವಿಮಾನಕ್ಕೆ ಹಕ್ಕಿಗಳು ಢಿಕ್ಕಿಯಾದ ಕಾರಣ ಸದ್ಯ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ವರದಿಯಾಗಿದೆ.
ಟಿವಿ ವರದಿಗಳ ಪ್ರಕಾರ, ಫೆಡ್ಎಕ್ಸ್ ವಿಮಾನವು ಪಕ್ಷಿಗಳ ಹೊಡೆತವನ್ನು ಅನುಭವಿಸಿದಾಗ ಆಗಷ್ಟೇ ಟೇಕಾಫ್ ಆಗಿತ್ತು.
ಅಪಘಾತ ಸಂಭವಿಸುವ ಅಪಾಯವಿರುವ ಕಾರಣ ವಿಮಾನವು ಏರೋಡ್ರೋಮ್ ನ್ನು ಸಮೀಪಿಸಿದಾಗ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.
ವಿಮಾನವನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಸಲು ಮತ್ತು ತಂತ್ರಜ್ಞರು ಕ್ಲಿಯರೆನ್ಸ್ ಮಾಡುವ ಮೊದಲು ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷವಿದೆಯೇ ಎಂದು ಪರಿಶೀಲಿಸಲಿದ್ದಾರೆ.
ಇದೇ ರೀತಿಯ ಘಟನೆ ಹಿಂದೆ ವರದಿಯಾಗಿದೆ.ಭಾನುವಾರ ಇಂಡಿಗೋ ವಿಮಾನವು ಸೂರತ್ನಿಂದ ಟೇಕಾಫ್ ಆಗುವಾಗ ಹಕ್ಕಿ ಡಿಕ್ಕಿಗೆ ಒಳಗಾಯಿತು ಮತ್ತು ಪರಿಣಾಮವಾಗಿ ಅಹಮದಾಬಾದ್ಗೆ ವಾಪಾಸ್ಸಾಗಿದೆ.