ತಮಿಳುನಾಡು:ಚಲಿಸುತ್ತಿದ್ದ ಬಸ್ನಿಂದ ಇಳಿಯಲು ಪ್ರಯತ್ನಿಸುವಾಗ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.ಅ
ಅಬ್ದುಲ್ ಕಲಾಂ ಮೃತ ಕಾಲೇಜು ವಿದ್ಯಾರ್ಥಿ.ಈತ ಕಾಲೇಜು ಮುಗಿಸಿ ಮನೆಗೆ ತೆರಳುವಾಗ ಚಲಿಸುತ್ತಿದ್ದ ಬಸ್ನಿಂದ ತುರ್ತಾಗಿ ಇಳಿಯಲು ಯತ್ನಿಸಿದ್ದಾನೆ.ಈ ವೇಳೆ ಬಸ್ ನಿಂದ ಬಿದ್ದು ಕಲಾಂ ಬಸ್ ನ ಹಿಂಬದಿ ಚಕ್ರದಡಿಗೆ ಸಿಲುಕಿದ್ದಾನೆ.
ಘಟನೆಯ ದೃಶ್ಯಾವಳಿ ಬಸ್ಸಿನ ಬಾಗಿಲ ಬಳಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯಲ್ಲಿ ಬಸ್ ನಿರ್ವಾಹಕ, ಚಾಲಕನ ನಿರ್ಲಕ್ಷ್ಯದ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ.