ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಸಿಎಂ ಭದ್ರತಾ ಸಿಬ್ಬಂದಿಗಳು ತಳ್ಳಿರುವ ಬಗ್ಗೆ ವಿಡಿಯೋ ವೈರಲ್ ಆಗಿದೆ.
ಜಿಲ್ಲೆಯ ಕಿತ್ತೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಬೆಂಗಾವಲು ಪಡೆ ಬರುವಾಗ ಭದ್ರತಾ ಸಿಬ್ಬಂದಿ ಕಟೀಲ್ ಅವರನ್ನು ತಳ್ಳಾಡಿದ್ದಾರೆ.
ಘಟನೆಯಿಂದ ಸಿಡಿಮಿಡಿಕೊಂಡ ನಳಿನ್ ಕುಮಾರ್ ಕಟೀಲ್, ತಮ್ಮನ್ನು ದೂಡಿದವರನ್ನು ಜೋರಾಗಿ ತಳ್ಳಿ ಸಿಟ್ಟು ತೀರಿಸಿಕೊಂಡಿದ್ದಾರೆ.ಬಳಿಕ ಸರಿಯಾದ ಸಮಯಕ್ಕೆ ತನ್ನ ವಾಹನ ಬಾರದೆ ಇದ್ದ ಕಾರಣ ಬೇರೆ ವಾಹನ ಏರಿ ಪ್ರಯಾಣಿಸಿದ್ದಾರೆ.