ಪುತ್ತೂರು;ಬುಸ್ತಾನುಲ್ ಉಲೂಂ ಮದ್ರಸ ಪೆರಿಗೇರಿ ವತಿಯಿಂದ 75ನೇ ಸ್ವಾತಂತ್ರ್ಯದಿನಾಚರಣೆ ಪೆರಿಗೇರಿ ಮದ್ರಸ ವಠಾರದಲ್ಲಿ ನಡೆಯಿತು.
ಸ್ಥಳೀಯ ಮದ್ರಸ ಉಪಾಧ್ಯಕ್ಷರಾದ ಆಬೂಬಕ್ಕರ್ (ಪೋಕ್ರ್ಚ) ಧ್ವಜಾರೋಹಣ ನೆರವೇರಿಸಿದರು ಹಾಗೂ ಮದ್ರಸ ಕಾರ್ಯದರ್ಶಿ ಆಬೂಬಕ್ಕರ್ ಕೆಮನ್ನಡ್ಕ ಸಹಕರಿಸಿದರು.ಸ್ಥಳೀಯ ಮುಅಲ್ಲಿಂರಾದ ಸ್ವಾದಿಕ್ ಮುಸ್ಲಿಯಾರ್ ಕಟ್ಟತ್ತಾರು ದುಅ ಹಾಗೂ ಸ್ವಾತಂತ್ರ್ಯದ ಕುರಿತು ಸಂದೇಶ ಭಾಷಣ ಮಾಡಿದರು.
ಮದ್ರಸ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಹಾಗೂ ಪ್ರತಿಜ್ಞೆ ಬೋದನೆಗೈದರು ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮದ್ರಸ ಕಮಿಟಿಯ ಸದಸ್ಯರಾದ ಇಬ್ರಾಹಿಂ ಪಟ್ಟೆ,ಮಹಮ್ಮದ್ (ಮಾಮು)ಪಟ್ಟೆ ಯೂಸುಫ್ ಪೆರಿಗೇರಿ, ರಪೀಕ್ ಪೆರಿಗೇರಿ,ಆಸೀಫ್ ಪೆರಿಗೇರಿ,ನೌಪಲ್ ಪೆರಿಗೇರಿ,ಇನ್ನಿತರು ಮದ್ರಸ ಕಮಿಟಿ ಪದಾಧಿಕಾರಿಗಳು ಊರಿನ ಹಲವಾರು ನಾಯಕರು ಭಾಗವಹಿಸಿದರು.ತದನಂತರ ಕಾರ್ಯಕ್ರಮದಲ್ಲಿ ಸಿಹಿ ತಿಂಡಿ ವಿತರಿಸಿದರು.