BREAKING ಬೆಳ್ತಂಗಡಿಯ ಯುವತಿ ಮಸ್ಕತ್ ನಲ್ಲಿ ಹೃದಯಾಘಾತದಿಂದ ಮೃತ್ಯು; ಮುಗಿಲು ಮುಟ್ಟಿದ ನುಸೈಬಾ ಕುಟುಂಬದ ರೋಧನ

ಮಸ್ಕತ್;ಬೆಳ್ತಂಗಡಿ‌ ಮೂಲದ ಯುವತಿಯೋರ್ವರು ಮಸ್ಕತ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಬೆಳ್ತಂಗಡಿಯ ಕಕ್ಕಿಂಜೆ ನೆರಿಯ ಬಲಿಪಾಯಿ ನಿವಾಸಿ ಮೂಸೆಕುಂಞ ಅವರ ಪುತ್ರಿ ನುಸೈಬಾ(30) ಮೃತ ಯುವತಿ.

ನುಸೈಬಾ ಗೆ ಬಿಸಿರೋಡ್ ನಿವಾಸಿ ಶಕೀಬ್ ಜೊತೆ 6 ವರ್ಷಗಳ ಹಿಂದೆ ವಿವಾಹವಾಗಿತ್ತು.ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಸಂಸಾರವು ಚೆನ್ನಾಗಿಯೇ ನಡೆಯುತ್ತಿತ್ತು.

ಇಂದು ಬೆಳಿಗ್ಗೆ ಮಸ್ಕತ್ ನಲ್ಲಿ ರೂಂ ನಲ್ಲಿ 5 ಗಂಟೆಗೆ ಎದ್ದು ನುಸೈಬ ಎಂದಿನಂತೆ ಪತಿಗೆ ಕೆಲಸಕ್ಕೆ ಕಳುಹಿಸಿದ್ದರು. ಬಳಿಕ 7 ಗಂಟೆಗೆ ಮೊದಲ ಶಿಪ್ಟ್ ಮುಗಿಸಿ ಪತಿ ರೂಂಗೆ ಬಂದು ನೋಡಿದಾಗ ಪತ್ನಿ ಪ್ರಜ್ಞೆ ಕಳೆದುಕೊಂಡಿದ್ದರು. ಬಳಿಕ ವೈದ್ಯರನ್ನು ಕರೆಸಿ ಪರಿಶೀಲಿಸಿದಾಗ ಮೃತಪಟ್ಟಿರುವುದು ತಿಳಿದು‌ ಬಂದಿದೆ.ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ವೈದ್ಯರು ಮಾಹಿತಿ‌ ನೀಡಿದ್ದಾರೆ.

ನುಸೈಬಾ ಪತಿಯ ಬಳಿ ಮಸ್ಕತ್ ಗೆ ಒಂದು ವರ್ಷಗಳ ಹಿಂದೆ ತೆರಳಿದ್ದರು ಎನ್ನಲಾಗಿದೆ. ಮೃತದೇಹ ಊರಿಗೆ ಕರೆ ತರುವ ಬಗ್ಗೆ ಕಾರ್ಯ ಚಟುವಟಿಕೆ ನಡೆಯುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com