ಬೆಂಗಳೂರು;ಹಾಸನದಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಭವಾನಿ ರೇವಣ್ಣ ಹೇಳಿರುವ ಬೆನ್ನಲ್ಲೇ ಹಾಸನ ಜೆಡಿಎಸ್ ಟಿಕೆಟ್ ಕುರಿತು ಭಾರೀ ಚರ್ಚೆಯಾಗಿತ್ತು.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಈ ಕುರಿತು ಪ್ರತಿಕ್ರಿಯಿಸಿ ಸೂಕ್ತ ಸ್ಪರ್ಧಿ ಇರುವುದರಿಂದ ಭವಾನಿ ಅವರು ಸ್ಪರ್ಧೆ ಮಾಡುವ ಅನಿವಾರ್ಯತೆ ಇಲ್ಲ ಎಂದು ಹೇಳಿದ್ದರು.
ಪರೋಕ್ಷವಾಗಿ ಟಿಕೆಟ್ ನಿರಾಕರಿಸಿದ್ದಾರೆ. ಈ ಮಧ್ಯೆ ಭವಾನಿ ರೇವಣ್ಣಗೆ ಬಿಜೆಪಿ ಪರೋಕ್ಷವಾಗಿ ಆಹ್ವಾನ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಭವಾನಿ ರೇವಣ್ಣ ಮತ್ತು ಕುಮಾರಸ್ವಾಮಿ ಅವರ ಹೇಳಿಕೆಯನ್ನು ಗಮನಿಸಿದ್ದೇನೆ.
ಹೊಳೆನರಸಿಪುರದಿಂದ ಭವಾನಿ ಅಕ್ಕ ಬಿಜೆಪಿ ಅಭ್ಯರ್ಥಿಯಾಗಲಿ ಎಂಬುದು ನನ್ನ ಮನಸ್ಸಿನಲ್ಲಿ ಇತ್ತು. ಆದರೆ ಮನೆಯಲ್ಲಿ ಗಲಾಟೆ ಹಚ್ಚಿಸುವ ಕೆಲಸ ಬಯಸಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ಆಹ್ವಾನಿಸಿದ್ದಾರೆ.