ಬಂಟ್ವಾಳ;ಮಸೀದಿಯಿಂದರಲ್ಲಿ ನಡೆದ ಏಲಂನಲ್ಲಿ ಬರೊಬ್ಬರಿ 4 ಲಕ್ಷ 33 ಸಾವಿರ ರೂ.ಗೆ ಒಂದು ಹಲಸಿನ ಕಾಯಿ ಏಲಂ ಆಗಿದ್ದು, ಸುದ್ದಿ ಇದೀಗ ಕರಾವಳಿಯಲ್ಲಿ ಭಾರೀ ವೈರಲ್ ಆಗಿದೆ.
ಮೂಲರಪಟ್ನ ಎಂಬಲ್ಲಿ ನವೀಕೃತ ಮಸೀದಿ ಉದ್ಘಾಟಣೆ ಕಾರ್ಯಕ್ರಮದಲ್ಲಿ ಖ್ಯಾತ ಇಸ್ಲಾಮಿಕ್ ವಾಗ್ಮಿ, ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಕೇರಳ ಅವರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಒಂದು ಹಲಸಿನ ಕಾಯಿ ಏಲಂಗೆ ತರಲಾಗಿತ್ತು.ಹಲಸಿನ ಕಾಯಿ ಸಿರಾಜುದ್ದೀನ್ ಖಾಸಿಮಿ ಏಲಂ ಕರೆದಾಗ ಲತೀಫ್ ಮತ್ತು ಅಝೀಝ್ ಅವರ ನಡುವೆ ಭಾರೀ ಪೈಪೋಟಿ ನಡೆದಿದೆ.
ಕೊನೆಗೆ 4,33,333 ರೂ.ಗೆ ಹಲಸಿನ ಕಾಯಿ ಲತೀಫ್ ಅವರ ಪಾಲಾಗಿದೆ.ಇದೀಗ ಈ ಸುದ್ದಿ ಕರಾವಳಿಯಲ್ಲಿ ಭಾರೀ ವೈರಲ್ ಆಗಿದ್ದು, ಜನರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.
ಏಲಂ ವೇಳೆ ಹಲವರು ಭಾಗವಹಿಸಿದ್ದರು. ಆದರೆ ಭಾರೀ ಪೈಪೋಟಿಯೇ ನಡೆದಿತ್ತು. ಅಂತಿಮವಾಗಿ ಬೃಹತ್ ಮೊತ್ತಕ್ಕೆ ಹಲಸಿನ ಕಾಯಿಯೊಂದು ಏಲಂ ಆಗಿದೆ.