ಯುವತಿಯನ್ನು ಬರ್ಬರವಾಗಿ ಕೊಲೆ
ತ್ರಿಶೂರು;ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಶವವನ್ನು ಕಾಡಿನಲ್ಲಿ ಎಸೆದಿರುವ ಘಟನೆ ಕೇರಳದಲ್ಲಿ ನಡೆದಿದೆ.
26 ವರ್ಷದ ಮಹಿಳೆ ಅಥಿರಾಗೆ ಕೊಲೆ ಮಾಡಿ ತ್ರಿಸ್ಸೂರ್ ಜಿಲ್ಲೆಯ ಚಾಲಾಕುಡಿಯ ತುಂಬುರ್ ಮೂಜಿ ಕಾಡಿನಲ್ಲಿ ಎಸೆಯಲಾಗಿದೆ.
ಅಥಿರಾ ತನ್ನ ಸ್ನೇಹಿತನಾದ ಅಖಿಲ್ ಗೆ ಸಾಲವನ್ನು ನೀಡಿದ್ದಳು. ಅಲ್ಲದೆ, ಅಖಿಲ್ ಈ ಹಣವನ್ನು ಕಂತಿನ ರೂಪದಲ್ಲಿ ಮರುಳಿಸುತ್ತಿದ್ದ ಎನ್ನಲಾಗಿದೆ. ಈ ನಡುವೆ ಅಥಿರಾ ಹಣವನ್ನು ಒಮ್ಮೆಲೇ ನೀಡುವಂತೆ ಹೇಳಿದ್ದಾಳೆ.ಇದರಿಂದ ಆಕೆಗೆ ಕೊಲೆ ಮಾಡಿದ್ದಾನೆ.
ಸ್ಥಳೀಯ ಪತ್ರಿಕೆಯೊಂದರ ಪ್ರಕಾರ, ಅಥಿರಾಳ ಗಂಡ ಸನಿಲ್ ತನ್ನ ಹೆಂಡತಿ ಕಾಣೆಯಾಗಿದ್ದರ ಬಗ್ಗೆ ಕಾಲಡಿ ಪೊಲೀಸ್ ಸ್ಟೇಷನ್ ನಲ್ಲಿ ದೂರನ್ನು ದಾಖಲಿಸಿದ್ದರು. ದೂರನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಯ ಜಾಡು ಹಿಡಿದು ಹೊರಟಾಗ ಅಥಿರಾಳ ಮೊಬೈಲ್ ನ ಲಾಸ್ಟ್ ಲೊಕೇಶನ್ ಟ್ರಾಕ್ ಮಾಡಿದ್ದಾರೆ. ಈ ವೇಳೆ ಲಾಸ್ಟ್ ಲೊಕೇಶನ್ ತುಂಬುರ್ ಮೂಜಿ ಕಾಡಿನ ಹತ್ತಿರ ದೊರೆತಿದ್ದು, ಅಖಿಲ್ ನ ಜೊತೆ ಇದ್ದುದು ತಿಳಿದು ಬಂದಿದೆ. ಅಖಿಲ್ ನನ್ನ ವಶಪಡಿಸಿಕೊಂಡು, ವಿಚಾರಣೆಗೆ ಒಳಪಡಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಪೋಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಅಖಿಲ್ ಸಾಲವನ್ನು ಹಿಂದಿರುಗಿಸಲಾಗದ ಕಾರಣದಿಂದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.