ಅಜ್ಮೀರ್;ಅಜ್ಮೀರ್ ಷರೀಫ್ನ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದಲ್ಲಿ ನಿನ್ನೆ ಘರ್ಷಣೆ ನಡೆದಿದೆ.
ಎರಡು ಪಂಗಡಗಳ ಸದಸ್ಯರು ಬರೇಲ್ವಿ ಮತ್ತು ಅಜ್ಮೀರ್ ಪಂಗಡದ ನಡುವೆ ಘರ್ಷಣೆ ನಡೆದಿದೆ.
ಬರೇಲ್ವಿ ಪಂಥದ ಸದಸ್ಯರು ಕೆಲವು ಸೂಕ್ತಗಳನ್ನು ಓದುವುದಕ್ಕೆ ದರ್ಗಾದ ಆಡಳಿತವು ಆಕ್ಷೇಪಣೆಯನ್ನು ಎತ್ತಿದ ನಂತರ ಎರಡು ಕಡೆಯವರು ಘರ್ಷಣೆಗಿಳಿದರು ಎಂದು ವರದಿ ತಿಳಿಸಿದೆ.
ಖ್ವಾಜಾ ಮೊಯಿನುದ್ದೀನ್ ಚಿಶ್ತಿಯ ದರ್ಗಾದಲ್ಲಿ 811 ನೇ ಉರುಸ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಬರೇಲ್ವಿ ಸಮುದಾಯದ ಕೆಲವರು ದರ್ಗಾದೊಳಗೆ ಘೋಷಣೆಗಳನ್ನು ಕೂಗಿದರು ಎನ್ನಲಾಗಿದೆ.
ದರ್ಗಾದ ಠಾಣಾಧಿಕಾರಿ ಅಮರ್ ಸಿಂಗ್ ಭಾಟಿ ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.