ಉಳ್ಳಾಲ; ಮಹಿಳೆಯನ್ನು ಚೂರಿಯಿಂದ ಇರಿದು ಕೊಲೆ, ಸ್ಥಳಕ್ಕೆ ಪೊಲೀಸರು ದೌಡು

ಉಳ್ಳಾಲ; ಚೂರಿಯಿಂದ ಇರಿದು ಮಹಿಳೆಯನ್ನು ಕೊಲೆ‌ ಮಾಡಿರುವ ಘಟನೆ ಉಳ್ಳಾಲ ಕೋಟೆಪುರದ ಬಾಡಿಗೆ ಮನೆಯೊಂದರಲ್ಲಿ ನಡೆದಿದೆ. ದೆಹಲಿ ಮೂಲದ 40-45 ರ ಹರೆಯದ ಮಹಿಳೆಯ‌ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ. ಮಹಿಳೆ ಜೊತೆಗಿದ್ದ ನಯೀಮ್ ಎಂಬಾತ ಪರಾರಿಯಾಗಿದ್ದಾನೆ.ಮೂರು ದಿನಗಳ ಹಿಂದೆ ಉಳ್ಳಾಲಕ್ಕೆ ಬಂದ ಜೋಡಿ ಬಟ್ಟೆ ವ್ಯಾಪಾರಿಗಳೆಂದು ಹೇಳಿ ಸೆಲೂನ್ ಮಾಲಕನೋರ್ವನ ಸಹಾಯದಿಂದ ಬಾಡಿಗೆ ಮನೆಯನ್ನು ಪಡೆದಿದ್ದರು. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಕೋರ್ಟ್ ಆವರಣದಲ್ಲಿ ವಕೀಲರಿಂದ ಹೊಡೆದಾಟ;ಶಾಕಿಂಗ್ ವಿಡಿಯೋ ವೈರಲ್…

ಕೋರ್ಟ್​ ಆವರಣದಲ್ಲಿ ವಕೀಲರುಗಳ ನಡುವೆ ನಡೆದ ಹೊಡೆದಾಟದ ವಿಡಿಯೋ ವೈರಲ್​ ಆಗಿದೆ. ದ್ವಾರಕಾ ಜಿಲ್ಲಾ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.ಭದ್ರತಾ ಸಿಬ್ಬಂದಿಗಳ ಎದುರೇ ಈ ಘಟನೆ ನಡೆದಿದೆ. ಈ ಕುರಿತು ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ವೈರಲ್ ವಿಡಿಯೋದಲ್ಲಿ ಇಬ್ಬರು ವಕೀಲರು ಒಂದು ಕಡೆ ಜಗಳವಾಡುತ್ತಿದ್ದರು.ಸ್ವಲ್ಪ ಹೊತ್ತಲ್ಲೇ ಒಬ್ಬ ವಕೀಲ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು.ಇದರ ಜೊತೆ ಕೆಲ ವಕೀಲರು ಹೊಡೆದಾಡುವುದು ಸೆರೆಯಾಗಿದೆ. ವಕೀಲರ ಹೊಡೆದಾಟದ ಬಗ್ಗೆ ಜನರು ವಿಬಿನ್ನವಾಗಿ … Read more

ಮೂಡಿಗೆರೆಯಲ್ಲಿ ಬಿಜೆಪಿ ಶಾಸಕನ ವಿರುದ್ಧ ಬಿಜೆಪಿ ಕಾರ್ಯಕರ್ತರಿಂದಲೇ ಪ್ರತಿಭಟನೆ, ಕಣ್ಣೀರು ಹಾಕಿ ಶಾಸಕ ಎಂಪಿ ಕುಮಾರಸ್ವಾಮಿ ಹೇಳಿದ್ದೇನು?

ಚಿಕ್ಕಮಗಳೂರು:ಮೂಡಿಗೆರೆ ಕ್ಷೇತ್ರದಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿರುವುದಕ್ಕೆ ಶಾಸಕ ಎಂಪಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. ಬೀದಿ ಕಾರ್ಯಕರ್ತರ ಪ್ರತಿಭಟನೆ ಕಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್.‌ಯಡಿಯೂರಪ್ಪ ಅವರು ವಿಜಯ ಸಂಕಲ್ಪ ರಥ ಯಾತ್ರೆಯನ್ನು ರದ್ದುಪಡಿಸಿ ತೆರಳಿದ್ದರು.ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಎಂ.ಪಿ. ಕುಮಾರಸ್ವಾಮಿ, ನಾನು ದಲಿತ ಎಂಬ ಕಾರಣಕ್ಕೆ ಕಾರ್ಯಕರ್ತರು ಹೀಗೆಲ್ಲ ಪಿತೂರಿ, ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಬೇರೆ ಸಮುದಾಯದ ಶಾಸಕರಾಗಿದ್ದರೆ ಹೀಗೆ ಮಾಡುತ್ತಿದ್ದರೇ ಎಂದು ಎಂಪಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. ಮೂಡಿಗೆರೆಯಲ್ಲಿ … Read more

ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಅಪಘಾತ; ಹಠ ಹಿಡಿದು ಆಸ್ಪತ್ರೆಯಿಂದಲೇ ಪರೀಕ್ಷೆ ಬರೆದ ಬಾಲಕ

ಪರೀಕ್ಷಾ ಕೇಂದ್ರಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬೈಕ್ ಅಪಘಾತಗೊಂಡು ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿದ್ದು, ಕೊನೆಗೆ ಹಠ ಹಿಡಿದು ಬಾಲಕ ಪರೀಕ್ಷೆಯನ್ನು ಆಸ್ಪತ್ರೆಯಲ್ಲೆ ಬರೆದಿದ್ದಾನೆ.ಈ ಘಟನೆ ಪ.ಬಂಗಾಳದಿಂದ ವರದಿಯಾಗಿದೆ. ಅಲಿನಗರ್ ಯಾಸಿನ್​ ಮಲೀಕ್​ ಶಾಲೆಯ ವಿದ್ಯಾರ್ಥಿ 15 ವರ್ಷದ ಸಂದೀಪ್ ಪರೀಕ್ಷೆಗೆ ತೆರಳುವಾಗ ಅಪಘಾತವಾಗಿದೆ. ಅಪಘಾತದಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು.ಸಂದೀಪ್ ಗೆ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರೂ ಕೂಡಾ ಆತ ತನ್ನನ್ನು ಪರೀಕ್ಷಾ ಕೊಠಡಿಗೆ ಬಿಡಿ ಎಂದು ಹೇಳಿದ.ಕೊನೆಗೆ ಆತನಿಗೆ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬರಲಾಯಿತು. ​ಆದರೆ ಪರೀಕ್ಷೆ ಬರೆಯುತ್ತಿರುವ … Read more

ಪುತ್ತೂರು; ನಗರಸಭಾ ಸದಸ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ

ಪುತ್ತೂರು:ನಗರಸಭಾ ಸದಸ್ಯ ಶಿವರಾಮ್ ಸಪಲ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ. ಊರಮಾಲು ನಿವಾಸಿಯಾಗಿರುವ ಮನೆಯಲ್ಲಿ ಶಿವರಾಮ್ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪತ್ನಿ ಫೋನ್ ಕರೆ ಮಾಡಿದಾಗ ಸ್ವೀಕರಿಸುತ್ತಿಲ್ಲವೆಂದು ಪತ್ನಿಯು ಪಕ್ಕದ ಮನೆಯವರಿಗೆ ವಿಚಾರಿಸಿದ್ದಾರೆ.ಅವರು ಮನೆ ಬಳಿ ಬಂದು ನೋಡಿದಾಗ ಶಿವರಾಮ್ ರವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಇನ್ನು ಶಿವರಾಮ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅವರು ಒಂದನೇ ವಾರ್ಡ್ ನ ಸದಸ್ಯರಾಗಿದ್ದರು ಎನ್ನಲಾಗಿದೆ.

BIG NEWS ಎದೆಹಾಲು ಕುಡಿಯುವಾಗ ಉಸಿರುಗಟ್ಟಿ ನವಜಾತ ಶಿಶು ಸಾವು; ಮನನೊಂದು 7 ವರ್ಷದ ಮಗನ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ

ಎದೆಹಾಲು ಕುಡಿಯುವಾಗ ಉಸಿರುಗಟ್ಟಿ ನವಜಾತ ಶಿಶು ಸಾವು;ಮನನೊಂದು 7 ವರ್ಷದ ಮಗನ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ ತಿರುವನಂತಪುರಂ:ಶಿಶು ಸಾವಿನಿಂದ ಕಂಗೆಟ್ಟ ತಾಯಿ ತನ್ನ ಹಿರಿಯ ಮಗನ ಜೊತೆ ಇಂದು ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಇಡುಕ್ಕಿ ಜಿಲ್ಲೆಯ ಉಪ್ಪುತಾರ ಪಂಚಾಯತ್‌ನ ಕೈತಪಥಲ್‌ನ ನಿವಾಸಿ ಲಿಜಿ (38) ಮತ್ತು ಅವರ ಮಗ ಬೆನ್ ಟಾಮ್ (7) ಮೃತರು.ಇಡುಕ್ಕಿಯ ಪೂಪ್ಪಾರ ಬಳಿಯ ಲಿಜಿ ಅವರ ಮನೆಯಲ್ಲಿ ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ … Read more

ಲುಲು ಸಿಬ್ಬಂದಿಗಳ ತಿಂಗಳ ಒಟ್ಟು ಸ್ಯಾಲರಿ ಎಷ್ಟು ಕೋಟಿ ಗೊತ್ತಾ?

ದುಬೈ: ಲೈಫ್ ಮಿಷನ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿರುವ ಕುರಿತ ವರದಿಗಳನ್ನು ಲುಲು ಗ್ರೂಪ್ ಅಧ್ಯಕ್ಷ ಯೂಸುಫಲಿ ಎಂ ಎ ತಳ್ಳಿಹಾಕಿ ನಿನ್ನೆ ಸುದ್ದಿಗೋಷ್ಟಿ ನಡೆಸಿದ್ದಾರೆ. ಲುಲು ಗ್ರೂಪ್ ಅಧ್ಯಕ್ಷ ಯೂಸುಫಲಿ ಅವರು ಮಾತಾನಾಡುತ್ತಾ, ತಮ್ಮ ಸಂಸ್ಥೆಯು ರಚನಾತ್ಮಕ ಕಂಪನಿಯಾಗಿದೆ. ತಮ್ಮ ಸಂಸ್ಥೆಯು ಸಾವಿರಾರು ಉದ್ಯೋಗಿಗಳನ್ನು ಹೊಂದಿರುವ ರಚನಾತ್ಮಕ ಕಂಪನಿಯಾಗಿದೆ ಎಂದು ಹೇಳಿದರು. ಲುಲು 65,000 ಜನರಿಗೆ ಉದ್ಯೋಗ ನೀಡುವ ರಚನಾತ್ಮಕ ಕಂಪನಿಯಾಗಿದೆ. 310 ಕೋಟಿ ರೂಪಾಯಿಗಳನ್ನು ಭಾರತದ ಹೊರಗೆ ಮತ್ತು 25 ಕೋಟಿ … Read more

ಮಂಗಳೂರು; ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯ ಆತ್ಮಹತ್ಯೆ

ಮಂಗಳೂರು:ಬಿಜೆಪಿ ಬೆಂಬಲಿತ ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಂದೀಪ್ ಶೆಟ್ಟಿ ಮೊಗರು(35) ಆತ್ಮಹತ್ಯೆ ಮಾಡಿಕೊಂಡವರು.ಸಂದೀಪ್ ಗಂಜಿಮಠ ಗ್ರಾಮ ಪಂಚಾಯತ್ ನ ಮೊಗರು ವಾರ್ಡ್ ನ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದರು. ನಿನ್ನೆ ಮದ್ಯಾಹ್ನ ಸಂದೀಪ್ ನಾಪತ್ತೆಯಾಗಿದ್ದರು.ಬಳಿಕ ಹುಡುಕಾಟ ನಡೆಸಿದಾಗ ನೀರುಮಾರ್ಗದಲ್ಲಿರುವ ಕಟೀಲೇಶ್ವರಿ ಸೇವಾ ಸಿಂದು ಕಚೇರಿಯಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ಈ ಕುರಿತು ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ಬಹಿರಂಗವಾಗಬೇಕಿದೆ.

ತಾಯಿಯ ಗರ್ಭದಲ್ಲಿರುವ ಭ್ರೂಣದ ಹೃದಯದ ಬ್ಲಾಕ್ ತೆಗೆದ ವೈದ್ಯರು; ಜಸ್ಟ್ 90 ಸೆಕೆಂಡ್ ನಲ್ಲಿ ಅಪಾಯಾಕಾರಿ ಸರ್ಜರಿ ಮಾಡಿದ ವೈದ್ಯರು!

ಗರ್ಭದಲ್ಲಿ ಭ್ರೂಣದ ಹೃದಯಕ್ಕೆ ಶಸ್ತ್ರಚಿಕಿತ್ಸೆ ಮಾಡಿ ಬ್ಲಾಕ್ ತೆಗೆಯುವ ಮೂಲಕ ವೈದ್ಯರು ಅಚ್ಚರಿಯ ಸಾಹಸವನ್ನು ಯಶಸ್ವಿಯಾಗಿ ಮಾಡಿದ್ದಾರೆ. ದೆಹಲಿಯ ಪ್ರತಿಷ್ಠಿತ ಏಮ್ಸ್‌ (AIMMS) ಕಾರ್ಡಿಯೋರಾಕಿಕ್ ಸೈನ್ಸಸ್ ಕೇಂದ್ರದ ನುರಿತ ಹೃದ್ರೋಗ ತಜ್ಞರು ಈ ಸಾಧನೆ ಮಾಡಿದ್ದಾರೆ. ಗರ್ಭದಲ್ಲಿರುವ ಭ್ರೂಣದ ಹೃದಯದಲ್ಲಿ ಬ್ಲಾಕ್ ಇರುವುದನ್ನು ಪತ್ತೆ ಮಾಡಿ ವೈದ್ಯರು, ಬ್ಲಾಕ್ ತೆರವುಗೊಳಿಸಲು ಗರ್ಭದ ಒಳಗೆ ಅಪಾಯಕಾರಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ತಾಯಿಯ ಗರ್ಭದಲ್ಲಿರುವ ಭ್ರೂಣದ ಹೃದಯ ಸಣ್ಣ ದ್ರಾಕ್ಷಿ ಗಾತ್ರದ್ದು.ಹೃದಯದ ಬ್ಲಾಕ್ ತೆರೆವು ಮಾಡಲು ಬಲೂನ್ ಡಿಲೇಷನ್ ಶಸ್ತ್ರಚಿಕಿತ್ಸೆ ಮಾಡಬೇಕು.ಅದೂ … Read more

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಆಸ್ಪತ್ರೆಯಲ್ಲಿ ಮೃತ್ಯು

ಕಾರ್ಕಳ;ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ. ಮೃತನಿಗೆ ಹಿರಿಯಂಗಡಿಯ ಪ್ರಜ್ವಲ್‌ ದೇವಾಡಿಗ(18) ಎಂದು ಗುರುತಿಸಲಾಗಿದೆ. ಪ್ರಜ್ವಲ್ ಮಾರ್ಚ್ 12ರಂದು ಮನೆಯಲ್ಲಿ ಒಬ್ಬನೇ ಇದ್ದ ಸಂದರ್ಭ ವಿಷ ಸೇವಿಸಿದ್ದ ಎನ್ನಲಾಗಿದೆ. ಪ್ರಜ್ವಲ್ ಗೆಳೆಯ ಈ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದ್ದಾನೆ.ಕೂಡಲೇ ಪ್ರಜ್ವಲ್‌ನನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆಗೆ ಸ್ಪಂದಿಸದ ಪ್ರಜ್ವಲ್‌ ಮಂಗಳವಾರ ಸಾವನಪ್ಪಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.