ಮೂವರು ಮಕ್ಕಳನ್ನು ಕೆರೆಗೆ ಎಸೆದು ತಾಯಿ ಆತ್ಮಹತ್ಯೆ; ಇಡೀ ರಾಜ್ಯವೇ ಬೆಚ್ಚಿಬೀಳಿಸಿದ ಘಟನೆ

ವಿಜಯಪುರ;ಮೂವರು ಮಕ್ಕಳನ್ನು ಹೊಂಡಕ್ಕೆ ಎಸೆದು ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ತೊರವಿ ತಾಂಡಾ-1 ರ ತೋಟದಲ್ಲಿ ಅನಿತಾ ಪಿಂಟು ಜಾಧವ್ (27) ಎಂಬ ಯುವತಿ ತನ್ನ ಮೂವರು ಮಕ್ಕಳನ್ನು ಕೆರೆಗೆ ಎಸೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ತಾಯಿ ಸೇರಿ ಪ್ರವೀಣ(6) ಸುದೀಪ (4) ಮದಿಕಾ (2) ಮೃತಪಟ್ಟಿದ್ದಾರೆ. ಯುವತಿ ಕೌಟುಂಬಿಕ ಕಲಹದಿಂದ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಚಿಕ್ಕೋಡಿಯ ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್; ಏನಿದು ಪ್ರಕರಣ ಗೊತ್ತಾ?

ಚಿಕ್ಕೋಡಿ: ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆಮೂವರು ಆರೋಪಿಗಳಿಗೆ ಏಳನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ. ಯುವಕ-ಯುವತಿಯನ್ನು ಜಾಲಿ ಗಿಡಗೆ ಕಟ್ಟಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ತಾಲೂಕಿನ ಮಮದಾಪೂರ ಕೆಕೆ ಗ್ರಾಮದ ಬಾಬು ಮುತ್ತೇಪ್ಪ ಆಕಳೆ, ನಾಗಪ್ಪ ಮುತ್ತೇಪ್ಪ ಆಕಳೆ, ಮುತ್ತೇಪ್ಪ ಭೀಮಪ್ಪ ಆಕಳೆ ಎಂಬ ಮೂವರು ದೋಷಿಗಳಿಗೆ ಜಿಲ್ಲಾ ನ್ಯಾಯಾಧೀಶ ಎಸ್.ಎಲ್.ಚೌವ್ಹಾಣ ಗಲ್ಲು ಶಿಕ್ಷೆ ನೀಡಿದ್ದಾರೆ. 2013ರ ಅಕ್ಟೋಬರ್ ನಲ್ಲಿ ವಿವಾಹಿತೆಯಾಗಿದ್ದ ಸಂಗೀತಾ ಬಾಬು ಆಕಳೆ ಮತ್ತು ಬಸವರಾಜ … Read more

ಹಳೆಯಂಗಡಿ ಕಾಲೇಜಿಗೆ ವ್ಯಾಪಿಸಿದ ಹಿಜಾಬ್ ವಿವಾದ: ಶಿಕ್ಷಣವನ್ನೇ ಮೊಟಕುಗೊಳಿಸಿ ಟೈಲರಿಂಗ್ ಕಡೆ ಮುಖಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಯರು

ಮಂಗಳೂರು: ಹಿಜಾಬ್ ವಿವಾದದಿಂದಾಗಿ ಹಳೆಯಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದೀಗ ಸುದ್ದಿಯಲ್ಲಿದೆ. ಮಂಗಳೂರಿನ ಯೂನಿವರ್ಸಿಟಿ ಕಾಲೇಜು, ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಳಿಕ ಇದೀಗ ಹಳೆಯಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ನಿಷೇಧದಿಂದ 19 ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸಮವಸ್ತ್ರವನ್ನು ಕಡ್ಡಾಯಗೊಳಿಸಿದ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಮಾರ್ಚ್ 15 ರ ಕರ್ನಾಟಕ ಹೈಕೋರ್ಟ್ ಆದೇಶದ  ಮುಂದಿಟ್ಟು ಹಳೆಯಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಸ್ಲಿಂ ಹುಡುಗಿಯರು ಹಿಜಾಬ್ … Read more

ಬಿಜೆಪಿ‌ ಸೇರಿದ್ದ ಕೊಳ್ಳೇಗಾಲ ಶಾಸಕ ಎನ್.‌ಮಹೇಶ್ ಬಣದ 7 ನಗರಸಭೆ ಸದಸ್ಯರು ಅನರ್ಹ!

ಚಾಮರಾಜನಗರ:ಅನರ್ಹಗೊಂಡ ಕೊಳ್ಳೇಗಾಲ ನಗರಸಭೆಯ ಏಳು ಮಂದಿ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ಹೈಕೋರ್ಟ್​​ನಲ್ಲಿ ವಜಾಗೊಂಡಿದೆ. ಬಹುಜನ ಸಮಾಜವಾದಿ ಪಕ್ಷದ ವಿಪ್ ಉಲ್ಲಂಘಿಸಿ ಬಿಜೆಪಿ ಬೆಂಬಲಿಸಿದ್ದ ಕಾರಣಕ್ಕಾಗಿ ನಗರಸಭೆ ಸದಸ್ಯ ಸ್ಥಾನವನ್ನು ಗಂಗಮ್ಮ, ನಾಗಮಣಿ, ನಾಗಸುಂದ್ರಮ್ಮ, ಪ್ರಕಾಶ್, ರಾಮಕೃಷ್ಣ, ನಾಸಿರ್ ಷರೀಫ್ ಹಾಗೂ ಪವಿತ್ರಾ ಕಳೆದುಕೊಂಡಿದ್ದರು. ಬಿಎಸ್​ಪಿಯಿಂದ ಶಾಸಕ ಎನ್.ಮಹೇಶ್ ಉಚ್ಚಾಟನೆಗೊಂಡ ಬಳಿಕ ಕೊಳ್ಳೇಗಾಲ ನಗರಸಭೆ ಚುನಾವಣೆಯಲ್ಲಿ ‘ಆನೆ’ ಗುರುತಿನಿಂದ ಗೆದ್ದಿದ್ದ 9 ಸದಸ್ಯರಲ್ಲಿ ಏಳು ಮಂದಿ ಸದಸ್ಯರು ಶಾಸಕ ಮಹೇಶ್ ಬಣ ಸೇರಿಕೊಂಡಿದ್ದರು. ಬಳಿಕ 2020ರ ಅ.29ರಂದು ನಗರಸಭೆ … Read more

ಪುತ್ತೂರಿನಲ್ಲಿ ಮಹಿಳೆಯ ಮೇಲೆ ರೇಪ್ ಮಾಡಿ ಆಕೆಯ ಪತಿಗೆ ವಿಡಿಯೋ‌ ಕಳುಹಿಸಿ ಕೊಟ್ಟ ದುಷ್ಕರ್ಮಿ

ಪುತ್ತೂರು;ಕೋಳಿ ಫಾರ್ಮ್‌ನಲ್ಲಿ ಕೆಲಸಕ್ಕಿದ್ದ ಮಹಿಳೆಯ ಮೇಲೆ ಫಾರ್ಮಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಯೋರ್ವ ಅತ್ಯಾಚಾರಗೈದು ವಿಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿರುವ ಬಗ್ಗೆ ಸಂಪ್ಯ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ ಅರಿಯಡ್ಕ ಗ್ರಾಮದ ಮಡ್ಯಂಗಳ ಎಂಬಲ್ಲಿರುವ ಕೋಳಿ ಫಾರ್ಮ್‌ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಮ್ಮರ್ ಎಂಬಾತ ಕೆಲಸಕ್ಕೆ ಬರುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರಗೈದ ಬಳಿಕ ವಿಡಿಯೋ ಚಿತ್ರಿಕರಿಸಿ ಮಹಿಳೆಯ ಪತಿಗೆ ಕಳುಹಿಸಿರುವ ಆರೋಪ ಕೇಳಿ ಬಂದಿದೆ. ಮೇ 5 ರಂದು ಕೃತ್ಯ ನಡೆದಿದ್ದು, ಆರೋಪಿಯ ವಿರುದ್ದ ಮಹಿಳೆಯು ಸಂಪ್ಯ ಠಾಣೆಗೆ ದೂರು ನೀಡಿದ್ದಾರೆ.

ತುಮಕೂರು;ದಲಿತ‌‌ ಸಂಘರ್ಷ ಸಮಿತಿ‌ ಮುಖಂಡನ ಕೊಚ್ಚಿ ಕೊಲೆ

ತುಮಕೂರು:ದಲಿತ ಸಂಘರ್ಷ ಸಮಿತಿ ಮುಖಂಡನನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಬಿ.ಎಸ್. ರಸ್ತೆಯಲ್ಲಿ ನಡೆದಿದೆ. <script async src=”https://pagead2.googlesyndication.com/pagead/js/adsbygoogle.js?client=ca-pub-4685621585864602″ crossorigin=”anonymous”></script> ನರಸಿಂಹಮೂರ್ತಿ ಕೊಲೆಯಾದವರು. ಗುಬ್ಬಿ ತಾಲೂಕು ಡಿಎಸ್‌ಎಸ್ ಸಂಘದ ಸಂಚಾಲಕರಾಗಿದ್ದ ಮೂರ್ತಿ ಅವರು ಗುಬ್ಬಿ ಪಟ್ಟಣದ ಟೀ ಅಂಗಡಿ ಮುಂದೆ ಕುಳಿತಿದ್ದರು. ಈ ವೇಳೆ ಅಂಗಡಿ ಬಳಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ‌‌‌‌ ಕೊಲೆ ಮಾಡಿದ್ದಾರೆ. ಗಂಭೀರ ಗಾಯಗೊಂಡ ಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಈ ಕುರಿತು ಗುಬ್ಬಿ ಪೊಲೀಸ್ … Read more

ಮಂಗಳೂರು; ಪ್ರತಿಭಟನೆಯೆಂದು ವಿ ಹೆಚ್ ಪಿ ಪೋಸ್ಟರ್ ವೈರಲ್; ಈ ಬಗ್ಗೆ ಡಿಸಿಪಿ ಕೊಟ್ಟ ಸ್ಪಷ್ಟನೆ ಏನು ಗೊತ್ತಾ?

ಮಂಗಳೂರು: ನೂಪುರ್ ಶರ್ಮಾ ಬೆಂಬಲಿಸಿ ಜೂ.16ರಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ಯಾರೂ ಅನುಮತಿ ಕೋರಿಲ್ಲ ಮತ್ತು ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಮಂಗಳೂರು ಡಿಸಿಪಿ ಸ್ಪಷ್ಟನೆಯನ್ನು‌ ನೀಡಿದ್ದಾರೆ. ಮಂಗಳೂರಿನಲ್ಲಿ ಯಾವುದೇ ರೀತಿಯ ಪ್ರತಿಭಟನೆ ನಡೆಸಲು ಯಾರಿಗೂ ಅನುಮತಿ ನೀಡಿಲ್ಲ ಎಂದು ಮಂಗಳೂರು ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸಾರ್ವಜನಿಕ ಭದ್ರತೆಯ ಹಿತದೃಷ್ಟಿಯಿಂದ ಯಾವುದೇ ರೀತಿಯ ಪ್ರತಿಭಟನೆಯನ್ನು ಮಾಡಲು ಅನುಮತಿ ನೀಡುವುದಿಲ್ಲ ಎಂದು ಸಹಾಯಕ ಪೊಲೀಸ್ ಆಯುಕ್ತರು ಹೇಳಿದ್ದಾರೆ‌. ಈ ಮೊದಲು ವಿಶ್ವ … Read more

ಬೆಂಗಳೂರು; ಪ್ರತಿಷ್ಟಿತ ಆಸ್ಪತ್ರೆಯ ಯುವ ವೈದ್ಯ ಆತ್ಮಹತ್ಯೆ

ಬೆಂಗಳೂರು; ಪ್ರತಿಷ್ಠಿತ ಆಸ್ಪತ್ರೆ ವೈದ್ಯರೋರ್ವರು ಅಪಾರ್ಟ್​ಮೆಂಟ್​ನ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ಇಂದು ನಡೆದಿದೆ. ಬೆಂಗಳೂರಿನ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಗೋದ್ರೇಜ್ ಅಪಾರ್ಟ್‌ಮೆಂಟ್‌ನ 11ನೇ ಮಹಡಿಯಿಂದ ಹಾರಿ 31 ವರ್ಷದ ವೈದ್ಯ ಪೃಥ್ವಿರಾಜ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆಗೆ ಕಾರಣ ಏನೆಂದು ಗೊತ್ತಾಗಿಲ್ಲ. ವೈದ್ಯನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಆಂಧ್ರದಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಡಾ. ಪೃಥ್ವಿರಾಜ್​ ಪತ್ನಿಯೂ ವೈದ್ಯೆ. ಸುಖವಾಗಿ ಸಂಸಾರ ಮಾಡಬೇಕಿದ್ದವರು ಹೀಗೆಕೆ‌ … Read more

ಯುವಕನನ್ನು ಅಪಹರಿಸಿ ಬಲವಂತವಾಗಿ ಯುವತಿ ಜೊತೆ ಮದುವೆ ಮಾಡಿಸಿದ ಜನ; ಅಪರೂಪದ ಘಟನೆ

ಬಿಹಾರ: ಪಶುವೈದ್ಯನನ್ನು ಅಪಹರಿಸಿ ಬಲವಂತವಾಗಿ ಯುವತಿಯೊಂದಿಗೆ ಮದುವೆ ಮಾಡಿಸಿರುವ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ನಡೆದಿದೆ. ತೆಘ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಪಿಧೌಲಿ ಗ್ರಾಮದ ಪಶುವೈದ್ಯ ಸತ್ಯಂ ಕುಮಾರ್ ಝಾ ದನಗಳ ಚಿಕಿತ್ಸೆಗೆಂದು ಗ್ರಾಮಕ್ಕೆ ಹೋಗಿದ್ದರು.ಈ ವೇಳೆ ಅಲ್ಲಿದ್ದ ಗ್ರಾಮಮಸ್ಥರು ಸತ್ಯಂನನ್ನು ಅಪಹರಿಸಿ ಯುವತಿಯೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಈ ಬಗ್ಗೆ ದೂರು‌ ನೀಡಿರುವ ಸತ್ಯಂ ತಂದೆ ಸುಭೋದ್,ಸತ್ಯಂ ಸಂಜೆಯಾದ್ರೂ ಮನೆಗೆ ಬರದಿದ್ದಾಗ, ನಾವು ಅವನನ್ನು ಹುಡುಕಲು ಪ್ರಾರಂಭಿಸಿದೆವು. ಮಂಗಳವಾರ ಬೆಳಗ್ಗೆ ನನ್ನ ಮೊಬೈಲ್‌ಗೆ ಒಂದು ವಿಡಿಯೋ … Read more

ಅಕ್ರಮ ಸಂಬಂಧಕ್ಕೆ ನಡೆದೇ ಹೋಯ್ತು ಗೆಳೆಯನ‌ ಕೊಲೆ; ಮುಸ್ತಫಾಗೆ ಕೊಲೆ ಮಾಡಿ ಬೆಂಕಿ ಹಚ್ಚಿದ್ದ ಗೆಳೆಯ

ಚಿಕ್ಕಬಳ್ಳಾಪುರ:ಗೆಳೆಯನನ್ನೇ ವ್ಯಕ್ತಿಯೋರ್ವ ಕತ್ತು ಹಿಸುಕಿ ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಸಯ್ಯದ್​ ಮುಸ್ತಾಫ ಕೊಲೆಯಾದ ವ್ಯಕ್ತಿ, ಈತನಿಗೆ ಗೆಳೆಯ ಬಾಬಾ ವಲಿ ಹೆಂಡತಿ ಜೊತೆ ಅಕ್ರಮ ಸಂಬಂಧ ಇತ್ತು ಎಂಬ‌ ಬಗ್ಗೆ ಮಾಹಿತಿ‌ ಇದೆ. ಇದರಿಂದ ಸಯ್ಯದ್ ನನ್ನು, ಬಾಬಾವಲಿಯು ಬೆಂಗಳೂರಿನಿಂದ ಆಂಧ್ರಕ್ಕೆ ಕರೆದುಕೊಂದು ಹೋಗಿದ್ದು. ಮರಳಿ ಬರುವಾಗ ದಾರಿಯಲ್ಲಿ ಕೊಲೆ ಮಾಡಿ ಸುಟ್ಟು ಹಾಕಿದ್ದಾನೆ. ಈ ಬಗ್ಗೆ ಬಾಗೇಪಲ್ಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.