BREAKING ಖ್ಯಾತ ಫ್ಯಾಷನ್ ಡಿಸೈನರ್ ಶವವಾಗಿ ಪತ್ತೆ

  ಹೈದರಾಬಾದ್: ಖ್ಯಾತ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ತೆಲಂಗಾಣದ ಬಂಜಾರಾ ಹಿಲ್ಸ್ ನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಎಎನ್ ಐ ವರದಿ ಮಾಡಿದೆ. ಪೊಲೀಸರು ಆಕೆಯ ಮಲಗುವ ಕೋಣೆಯಿಂದ ಕಾರ್ಬನ್ ಮಾನಾಕ್ಸೈಡ್ ಸಿಲಿಂಡರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ‌ ಜೊತೆಗೆ‌ ಅನುಮಾನಾಸ್ಪದ ಸಾವಿನ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬುದಾಗಿ ಸರ್ಕಲ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.

ಉಳ್ಳಾಲದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೆಂಗರೆ ನಿವಾಸಿ ಸಿಡಿಲು ಬಡಿದು‌ ಮೃತ್ಯು

ಉಳ್ಳಾಲದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೆಂಗರೆ ನಿವಾಸಿ ಸಿಡಿಲು ಬಡಿದು‌ ಮೃತ್ಯು ಉಳ್ಳಾಲ: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಸಿಡಿಲು ಬಡಿದು ಮೃತಪಟ್ಟ ಘಟನೆ ಉಳ್ಳಾಲ ಸಮುದ್ರದಲ್ಲಿ ‌ನಡೆದಿದೆ‌. ಕಸಬಾ ಬೆಂಗರೆ ನಿವಾಸಿ ಹೈದರ್ ಆಲಿ (38) ಮೃತರು. ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ ಹೈದರಾಲಿ ಎಂದಿನಂತೆ ಇಂದು ಬೆಳಗ್ಗೆ ತನ್ನ ಸಹವರ್ತಿಗಳ ಜೊತೆ ಕಸಬಾ ಬೆಂಗರೆಯಿಂದ ಎ.ಎಸ್.ಎಫ್ ತವಕ್ಕಲ್ ಹೆಸರಿನ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಉಳ್ಳಾಲ ಕೋಡಿಯಿಂದ ಸುಮಾರು 14 ಕಿ.ಮೀ ದೂರದಲ್ಲಿ ಬಲೆ ಬೀಸುತ್ತಿದ್ದಾಗ ಸಿಡಿಲು ಬಡಿದು ಹೈದರಾಲಿ … Read more

BIG NEWS ಬಿಎಂಟಿಸಿ ನೌಕರನೋರ್ವ ಟೋಪಿ ಹಾಕಿಕೊಂಡು ಕರ್ತವ್ಯಕ್ಕೆ ಬರುತ್ತಾರೆಂದು ಕೇಸರಿ ಶಾಲು ಹಾಕಿಕೊಂಡು ಬಂದ ಕೆಲ ಸಿಬ್ಬಂದಿಗಳು; ಧರ್ಮ ದಂಗಲ್ ಗೆ ಇಳಿದ ಸರಕಾರಿ ನೌಕರರು

  ಬೆಂಗಳೂರು:ಬಿಎಂಟಿಸಿ ಸಾರಿಗೆ ನಿಗಮದ ನೌಕರರು ಧರ್ಮದಂಗಲ್ ಗೆ ಕೈಹಾಕಿ ಇಡೀ ರಾಜ್ಯವೇ ನಾಚುವಂತೆ ಮಾಡಿದ್ದಾರೆ. BMTC ಯಲ್ಲೂ ಅಪ್ರಬುದ್ಧತೆಯಿಂದ ನಡೆದುಕೊಳ್ಳುವವರು ಇದ್ದಾರಾ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಮುಸ್ಲಿಂ ನೌಕರರೋರ್ವರು ಟೋಪಿ ಧರಿಸಿಕೊಂಡು ಹಿಂದಿನಿಂದಲೂ ಬಿಎಂಟಿಸಿ ಕರ್ತವ್ಯಕ್ಕೆ ಬರುತ್ತಿದ್ದರು.‌ ಇದನ್ನು ವಿರೋಧಿಸಿ, ಕೆಲ ನೌಕರರು ಕೇಸರಿ ಶಾಲು ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. BMTC ಸಂಸ್ಥೆಯಲ್ಲಿ ಕೇಸರಿ ಕಾರ್ಮಿಕರ ಸಂಘ ಎಂಬ ಹೆಸರಿನಲ್ಲಿ ತಂಡವನ್ನು ಕೂಡ ರಚಿಸಲಾಗಿದೆ ಎಂಬ ಮಾಹಿತಿ ಇದೆ. ಸುಮಾರು 1500 ನೌಕರರು ಸಂಘದ ಅಡಿಯಲ್ಲಿ … Read more

ವಿಟ್ಲದಲ್ಲಿ ಯುವಕನೋರ್ವ ನೇಣು ಬಿಗಿದು‌ ಆತ್ಮಹತ್ಯೆ

  ವಿಟ್ಲ:ಯುವಕನೋರ್ವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಚಂದಳಿಕೆ‌ ಬಳಿ‌ ನಡೆದಿದೆ. ಚಂದಳಿಕೆ ಮಾಡತ್ತಡ್ಕ ನಿವಾಸಿ ಜಯಕರ(35) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೇಸ್ತ್ರಿ ಕೆಲಸ ಮಾಡುತ್ತಿದ್ದ ಜಯಕರ ಇಂದು ಮುಂಜಾನೆಯಿಂದ ಕಾಣೆಯಾಗಿದ್ದರು. ಈ ಬಗ್ಗೆ ಮನೆಯವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಂಜೆ ವೇಳೆ ಅವರ ಮೃತದೇಹ ಮಾಡತ್ತಡ್ಕ ಸಮೀಪ ಗುಡ್ಡದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ … Read more

ನಾಳೆ ದಾವಣಗೆರೆಯಲ್ಲಿ ನಡೆಯಬೇಕಿದ್ದ ಎಸ್ ಡಿ ಪಿಐನ ಜನಾಧಿಕಾರಿ ಸಮಾವೇಶ ಮುಂದೂಡಿಕೆ

ದಾವಣಗೆರೆ:ನಾಳೆ ದಾವಣಗೆರೆ ನಗರದಲ್ಲಿ ನಡೆಯಬೇಕಿದ್ದ ಎಸ್ ಡಿ ಪಿಐನ ಜನಾಧಿಕಾರಿ ಸಮಾವೇಶವನ್ನು ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ನೂಪುರ್ ಹೇಳಿಕೆ ಖಂಡಿಸಿ, ಆಕೆಯನ್ನು ಬಂಧಿಸುವಂತೆ ದೇಶಾದ್ಯಂತ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲೂ ಪ್ರತಿಭಟನೆಗೆ ಅವಕಾಶ ನಿರಾಕರಣೆ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದಂತ SDPI ಜನಾಧಿಕಾರ ಸಮಾವೇಶವನ್ನು ರದ್ದುಗೊಳಿಸಲಾಗಿದೆ. ದೇಶಾದ್ಯಂತ ಪ್ರತಿಭಟನೆಯ ಹಿನ್ನಲೆಯಲ್ಲಿ, ಜಿಲ್ಲಾಡಳಿತದಿಂದ ಇಂದು ಸಂಜೆ 6 ಗಂಟೆಯಿಂದ, ನಾಳೆ ರಾತ್ರಿ 10 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಎಂಎಲ್ಸಿ ಚುನಾವಣೆ ವೇಳೆ ಸೂಟ್ ಕೇಸ್ ಕೊಟ್ಟ ಬಗ್ಗೆ ಸ್ಪೋಟಕ ಹೇಳಿಕೆ ಕೊಟ್ಟ ಶಾಸಕ; ಜೆಡಿಎಸ್ ನಲ್ಲಿ ಒಬ್ಬೊಬ್ಬ ಶಾಸಕನಿಗೆ ಎಷ್ಟೆಷ್ಟು ಕೊಟ್ಟಿದ್ದಾರಂತೆ ಗೊತ್ತಾ?

ಎಂಎಲ್ಸಿ ಚುನಾವಣೆ ವೇಳೆ ಸೂಟ್ ಕೇಸ್ ಕೊಟ್ಟ ಬಗ್ಗೆ ಸ್ಪೋಟಕ ಹೇಳಿಕೆ ಕೊಟ್ಟ ಶಾಸಕ; ಜೆಡಿಎಸ್ ನಲ್ಲಿ ಒಬ್ಬೊಬ್ಬ ಶಾಸಕನಿಗೆ ಎಷ್ಟೆಷ್ಟು ಕೊಟ್ಟಿದ್ದಾರಂತೆ ಗೊತ್ತಾ? ಕೋಲಾರ:JDS ಪಕ್ಷದಲ್ಲಿ ಎಂ ಎಲ್ ಸಿ ಆಗಬೇಕು ಅಂದ್ರೇ, ಒಬ್ಬೊಬ್ಬ ಶಾಸಕರಿಗೆ ತಲಾ 50 ಲಕ್ಷ ನೀಡಬೇಕು ಎಂದು ಜೆಡಿಎಸ್ ಕೋಲಾರ ಶಾಸಕ ಕೆ.ಶ್ರೀನಿವಾಸ್ ಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್ ಗೌಡ,ವಿಧಾನ ಪರಿಷತ್ ಚುನಾವಣೆಯ ಸಂದರ್ಭದಲ್ಲಿ ಪ್ರತಿಯೊಬ್ಬ ಶಾಸಕರಿಗೆ ತಲಾ 50 ಲಕ್ಷವನ್ನು ಜೆಡಿಎಸ್ … Read more

ತಾಯಿಗೆ ಚೂರಿಯಿಂದ ಇರಿದು ಲವ್ವರ್ ಜೊತೆ ಪರಾರಿಯಾದ ಯುವತಿ

ಧಾರವಾಡ; ಹೆತ್ತ ತಾಯಿಗೆ ಮಗಳು ತನ್ನ ಪ್ರಿಯತಮನ ಜೊತೆಗೆ ಸೇರಿ ಚಾಕು ಇರಿದಿರುವ ಘಟನೆ ಧಾರವಾಡದ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತನ್ನ ಲವರ್ ಜೊತೆಗೆ ಸೇರಿಕೊಂಡು ಸ್ವಂತ ತಾಯಿಗೆ ಮಗಳು ಚಾಕು ಇರಿದಿದ್ದು, ತಾಯಿ ಜೀಜಾಬಾಯಿ ಸ್ಥಿತಿ ಗಂಭೀರವಾಗಿದೆ. ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಜೀಜಾಬಾಯಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ತಾಯಿಗೆ ಚಾಕು ಇರಿದ ಮಗಳು ಪ್ರಿಯಕರನ ಜೊತೆಗೆ ಪರಾರಿಯಾಗಿದ್ದಾರೆ‌.

ವಿಟ್ಲ;ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ

ವಿಟ್ಲ:ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುವಾಗಿದೆ ಎಂದು ಆರೋಪಿಸಿ ವಿಟ್ಲಪಡ್ನೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ನಾಗೇಶ್ ಶೆಟ್ಟಿಯವರ ಪತ್ನಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮದುವೆಗೆ ಹೋಗಿ ಬಂದ ನಂತರ ಮನೇಲಿ ಇಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾಗಿದೆ ಎಂದು ಠಾಣೆಗೆ ದೂರು ನೀಡಿದ್ದಾರೆ. ಜೂ.8 ರಂದು ಮದುವೆ ಹೋಗುವ ವೇಳೆ ಚಿನ್ನಾಭರಣಗಳನ್ನು ಧರಿಸಿಕೊಂಡು ಹೋಗಿದ್ದು, ನಂತರ ಮದುವೆಯಿಂದ ಬಂದು ಮಲಗುವ ಕೋಣೆಯ ಗೋಡೆಯಲ್ಲಿ ರಚಿಸಲಾದ ಶೊಕೇಸ್ ನಲ್ಲಿ ಚಿನ್ನಾಭರಣಗಳನ್ನು ಇಟ್ಟಿದ್ದು, … Read more

ಕಾಲೇಜು ಕ್ಯಾಂಪಸ್ ನಲ್ಲೇ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ಯುವಕ

ಮಂಡ್ಯ:ಕಾಲೇಜು ಕ್ಯಾಂಪಸ್ ಬಳಿ ತೆರಳಿ ಭಗ್ನ‌ ಪ್ರೇಮಿಯೋರ್ವ ವಿದ್ಯಾರ್ಥಿನಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಇದನ್ನು ಕಂಡ ಜನ ಆತನಿಗೆ ಹಿಡಿದು ಥಳಿಸಿದ ಘಟನೆ ಮಂಡ್ಯ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆದಿದೆ ಪ್ಯಾರಾ ಮೆಡಿಕಲ್ ಓದುತ್ತಿದ್ದ ವೈ.ಯರಹಳ್ಳಿ ಗ್ರಾಮದ 20 ವರ್ಷದ ಯುವತಿ ಮೇಲೆ ಸಂಪತ್ ಕುಮಾರ್‌ ಹಲ್ಲೆ ನಡೆಸಿದ್ದಾನೆ. ಎರಡು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಪೋಷಕರ ಮಧ್ಯಸ್ಥಿಕೆಯಿಂದ ಪ್ರೀತಿಯಲ್ಲಿ ಬಿರುಕು ಮೂಡಿತ್ತು. ಇದರಿಂದಾಗಿ ಕಾಲೇಜು ಬಳಿಯೇ ಹೊಂಚು ಹಾಕಿ ಸಂಪತ್ ಕಾಲೇಜಿನಿಂದ ಹೊರಗೆ … Read more

ರಾಂಚಿಯಲ್ಲಿ ಪ್ರವಾದಿ ನಿಂದನೆ ವಿರುದ್ಧದ ಪ್ರತಿಭಟನೆ ವೇಳೆ ಘರ್ಷಣೆ; ಪೊಲೀಸ್ ಫೈರಿಂಗ್ ಗೆ ಅಪ್ರಾಪ್ತ ಬಾಲಕ ಸೇರಿ ಇಬ್ಬರು ಸಾವು, ಹಲವರಿಗೆ ಗುಂಡೇಟು

ರಾಂಚಿ;ಪ್ರವಾದಿ ನಿಂದನೆ ವಿರುದ್ಧ ಝಾರ್ಖಾಂಡ್ ನ‌ ರಾಂಚಿಯಲ್ಲಿ ಜನಾಕ್ರೋಶ ಭುಗಿಲೆದ್ದಿದ್ದು‌ ಫೈರಿಂಗ್ ನಲ್ಲಿ ಅಪ್ರಾಪ್ತ ಬಾಲಕ ಸೇರಿ‌ ಇಬ್ಬರು ಯುವಕರು‌ ಮೃತಪಟ್ಟ ಘಟನೆ ಬಗ್ಗೆ ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿದೆ. ಘಟನೆಯಲ್ಲಿ ಪೊಲೀಸರು ಸೇರಿ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ನೂಪುರ್ ಶರ್ಮಾ ಪ್ರವಾದಿ ವಿರುದ್ಧ ನೀಡಿದ ಹೇಳಿಕೆಯನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆ ಮುಂದುವರಿದಿದೆ. ಇದರ ಬೆನ್ನಲ್ಲೇ ರಾಂಚಿಯಲ್ಲಿ ಬಾರೀ ಉದ್ವಿಗ್ನಕ್ಕೆ ಕಾರಣವಾಗಿದೆ. ನೂಪುರ್ ಶರ್ಮಾ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ‌. ಈ ವೇಳೆ ಕಲ್ಲು ತೂರಾಟ … Read more